ಮಗುವಿಗೆ ಚಾಕಲೇಟ್, ಬಿಸ್ಕೇಟ್ ಕೊಟ್ಟು ಸ್ನೇಹ ಬೆಳೆಸಿಕೊಂಡು ಮನೆಗೆ ಎಂಟ್ರಿ: ಮಾಂಗಲ್ಯ ಸರ ಕದ್ದು ಡ್ರಾಮಾ ಮಾಡಿದ್ದ ಕಿಲಾಡಿ ಕಳ್ಳಿ ಕೊನೆಗೂ ಅರೆಸ್ಟ್

ಮಹಿಳೆಯೊಬ್ಬಳು ಪಕ್ಕದ ಮನೆಗೆ ಬಂದು ಪರಿಚಯಸ್ಥರಂತೆ ಮಾತನಾಡುತ್ತಾ, ಮನೆಯಲ್ಲಿದ್ದ ಮಗುವಿಗೆ ಪ್ರತಿದಿನ ಚಾಕಲೇಟ್, ಬಿಸ್ಕೇಟ್ ಕೊಟ್ಟು ತೆರಳುತ್ತಿದ್ದಳು. ಈ ವೇಳೆ ಹೊಂಚು ಹಾಕಿ ಮನೆಯಲ್ಲಿದ್ದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಳು.

ಶಿರಸಿ: ಕಳ್ಳತನದ ದೂರಿಗೆ ಸಂಬoಧಿಸಿದoತೆ ಓರ್ವ ಮಹಿಳೆಯನ್ನು ಬಂಧಿಸಿದ ಘಟನೆ ತಾಲೂಕಿನಲ್ಲಿ ನಡೆದಿದೆ. ಬಂಧಿತ ಮಹಿಳೆ ಶೋಭಾ ಸುಬ್ರಾಯ ಪೂಜಾರಿ ಎಂದು ತಿಳಿದುಬಂದಿದೆ. ಬಂಧಿತ ಮಹಿಳೆಯಿಂದ ಸುಮಾರು 2 ಲಕ್ಷ ಮೌಲ್ಯದ ಮಾಂಗಲ್ಯ ಸರ ಮತ್ತು 21 ಸಾವಿರ ಮೌಲ್ಯದ ನಗದು ವಶಪಡಿಸಿಕೊಳ್ಳಲಾಗಿದೆ.

ಕಸ್ತೂರಬಾ ನಗರದ ಸಾವಿತ್ರಿ ಹಡಗಲಿ ಅವರ ಮನೆಯಲ್ಲಿ ಕಳುವು ಕುರಿತು ಇಲ್ಲಿನ ಹೊಸ ಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಾವಿತ್ರಿ ಹಡಗಲಿ ಸ್ನಾನಕ್ಕೆ ಹೋಗುವ ಮುನ್ನ ತನ್ನ ಮಾಂಗಲ್ಯ ಸರವನ್ನು ತೆಗೆದು ಮನೆಯ ಕೋಣೆಯಲ್ಲಿ ಇಟ್ಟದ್ದಳು ಎನ್ನಲಾಗಿದೆ. ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದರು.

ಶೋಭಾ ಪೂಜಾರಿ ಪ್ರತಿದಿನ ಸಾವಿತ್ರಿಯ ಮನೆಗೆ ಬಂದು ಸಾವಿತ್ರಿಯ ಮಗುವಿಗೆ ಬಿಸ್ಕೇಟ್ , ಚಾಕಲೇಟ್ ಕೊಟ್ಟು ತೆರಳುತ್ತಿದ್ದಳು ಎನ್ನಲಾಗಿದೆ. ಸರ ನಾಮಪತ್ತೆಯಾದ ವೇಳೆ ಕೂಡಾ ಶೋಭಾ, ಸಾವಿತ್ರಿಯ ಮನೆಗೆ ಬಂದು ತೆರಳಿದ್ದಳು. ಹೀಗಾಗಿ ಪೊಲೀಸರಿಗೆ ಈಕೆಯ ಮೇಲೆ ಅನುಮಾನ ಇತ್ತು. ಈ ಎಲ್ಲದರ ಮಧ್ಯೆ ತನಗೆ ಗಂಡ ಇಲ್ಲ, ಸಾಲದ ಹೊರೆ ಇದೆ. ಹೀಗಾಗಿ ಚಿನ್ನದ ಸರವನ್ನು ಮಾರುತ್ತಿದ್ದೇನೆ ಎಂದು ಹೇಳಿ ಕದ್ದ ಸರವನ್ನು ಮಾರಿದ್ದಳು ಎಂಬ ವಿಷಯ ತನಿಖೆ ವೇಳೆ ಹೊರಬಂದಿದೆ.

ವಿಸ್ಮಯ ನ್ಯೂಸ್ , ಶಿರಸಿ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version