Follow Us On

WhatsApp Group
Focus News
Trending

ಕುಮಟಾ ನಾಮಧಾರಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಕುಮಟಾ : ಪಟ್ಟಣದ ಬಗ್ಗೋಣ ರಸ್ತೆಯಲ್ಲಿರುವ ಆರ್ಯ, ಈಡಿಗ, ನಾಮಧಾರಿ ಸಂಘದ ಮುಂದಿನ ಮೂರು ವರ್ಷದ ಆಡಳಿತಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ಮಂಜುನಾಥ ನಾಯ್ಕ (ಕೋಡ್ಕಣಿ), ಉಪಾಧ್ಯಕ್ಷರಾಗಿ ಅರುಣ್ ನಾಯ್ಕ (ತದಡಿ), ಕಾರ್ಯದರ್ಶಿಯಾಗಿ ರಾಘವೇಂದ್ರ ನಾಯ್ಕ (ಉಪ್ಪಾರಕೇರಿ), ಸಹ ಕಾರ್ಯದರ್ಶಿಯಾಗಿ ಸರ್ವೇಶ್ವರ ನಾಯ್ಕ (ಹೆರವಟ್ಟಾ), ಕೋಶಾಧ್ಯಕ್ಷರಾಗಿ ಕಮಲಾಕರ ನಾಯ್ಕ (ಕಲಭಾಗ್) ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ್ ನಾಯ್ಕ (ದೇವರಹಕ್ಕಲ್) ಇವರು ಆಯ್ಕೆಯಾಗಿದ್ದಾರೆ.

ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷ ಮಂಜುನಾಥ ನಾಯ್ಕ, “ಹಿರಿಯರ ಮಾರ್ಗದರ್ಶನಲ್ಲಿ ಸಮಾಜದ ಎಲ್ಲ ಸ್ಥರದ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುವುದು” ಎಂದರು.

ಕುಮಟಾದ ಬೇರೆ ಬೇರೆ ಭಾಗದಿಂದ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಎಲ್ಲ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದು, ಒಮ್ಮತದಿಂದ ಎಲ್ಲ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.

ವಿಸ್ಮಯ ನ್ಯೂಸ್ ಕುಮಟಾ

Back to top button