Follow Us On

WhatsApp Group
Important
Trending

ಕಡಲ ತೀರದಲ್ಲಿ ಪತ್ತೆಯಾದ ರುಂಡವಿಲ್ಲದ ಅಸ್ತಿಪಂಜರದಂತಿರುವ ಮೃತದೇಹ : ಮಿಸ್ಸಿಂಗ್ ಕೇಸ್ ಗಳಿಗೆ ಇರಬಹುದೇ ನಂಟು ?

ಅಂಕೋಲಾ: ದೇಹದ ಅಂಗಾಂಗಗಳು ಬಹುತೇಕ ಕೊಳೆತು,ಅಸ್ಥಿಪಂಜರದಂತೆ ಕಂಡು ಬಂದು, ಮೃತ ದೇಹ ಯಾರದ್ದೆಂದು ಗುರುತಿಸಲಾಗದಂತೆ, ಸಮುದ್ರದಲ್ಲಿ ತೇಲಿ ಬಂದಿರುವ ಘಟನೆ ಅಂಕೋಲಾ ತಾಲೂಕಿನ ಬೆಳಂಬಾರದ ಹಂದಗೋಣದಲ್ಲಿ ಪತ್ತೆಯಾಗಿದೆ.

ರುಂಡವಿಲ್ಲದ ಮುಂಡದಂತೆ ಭಾಸವಾಗಿ,ಕೊಳೆತು ಉಬ್ಬಿಹೋದ ಕೈ ಕಾಲುಗಳಂತೆ ಕಾಣುವ ಅಂಗಾಂಗಗಳನ್ನು ಹೊರತುಪಡಿಸಿ ಎಲುವಿನ ಹಂದರ ಕಂಡುಬರುತ್ತಿದ್ದು ದೇಹದ ಇತರೆ ಭಾಗಗಳು ಜಲಚರಗಳ ಪಾಲಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಳೆದ ಮೂರು ನಾಲ್ಕು ದಿನಗಳಿಂದ ಕಡಲಲ್ಲಿ ಭಾರಿ ಪ್ರಮಾಣದ ಅಲೆಗಳ ಅಬ್ಬರ ಕಂಡು ಬಂದಿದ್ದು,ಅಲೆಗಳ ರಭಸಕ್ಕೆ ಅದೆಲ್ಲಿಂದಲೋ ಮೃತದೇಹ ತೇಲಿ ಬಂದಿರಬಹುದೇ ಅಥವಾ ಸುತ್ತಮುತ್ತಲಿನ ಇತರೆ ಯಾರಾದರೂ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ಮೃತ ಪಟ್ಟರೆ ? ಇಲ್ಲವೇ ಆತ್ಮಹತ್ಯೆ ಕೊಲೆ ಮತ್ತಿತರ ಕಾರಣಗಳಿಂದ ಸಮುದ್ರದಲ್ಲಿ ಹೆಣ ತೇಲಿ ಬರುವಂತಾಯಿತೇ ಎಂಬ ಸಂಶಯದ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಂತಿದೆ.

ಇತ್ತೀಚಿನ ದಿನಗಳಲ್ಲಿ ತಾಲೂಕು ಹಾಗೂ ಜಿಲ್ಲೆ ಮತ್ತು ಕರಾವಳಿ ಭಾಗದಲ್ಲಿ ಕಾಣೆಯಾಗಿ, ಪ್ರಕರಣ ದಾಖಲಾಗಿದ್ದರೂ ಈವರೆಗೂ ಪತ್ತೆಯಾಗದ ವ್ಯಕ್ತಿಗಳಲ್ಲಿ ಯಾರಾದರೂ ಮೃತಪಟ್ಟಿರಬಹುದೇ
ಎನ್ನುವ ದಿಶೆಯಲ್ಲಿಯೂ ತನಿಖೆ ನಡೆಸುವ ಸಾಧ್ಯತೆ ಕೇಳಿ ಬಂದಿದೆ.

ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಹಂದಗೋಡದಲ್ಲಿ ಪತ್ತೆಯಾದ ಅಪರಿಚಿತ ಮೃತದೇಹದ ಡಿಎನ್ಎ ಮತ್ತಿತರ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯ,ಇನ್ನಿತರೆ ಪರೀಕ್ಷೆ ಮೂಲಕ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.

ಕಳೆದ ಕೆಲ ದಿನಗಳ ಹಿಂದಷ್ಟೇ ಗೋಕರ್ಣದ ಜಟಾಯು ತೀರ್ಥದ ಬಳಿ ರುಂಡವಿಲ್ಲದ ಮುಂಡ ಪತ್ತೆಯಾದಾಗ,ಆತ ಹಿಂದೆ ಅಂಕೋಲಾದಲ್ಲಿ ಕಾಣೆಯಾಗಿದ್ದ ವ್ಯಕ್ತಿಯಾಗಿರಬಹುದು ಎಂಬ ಸಂಶಯದ ಮಾತುಗಳು ಕೇಳಿಬಂದಿತ್ತು.ಅದೇ ರೀತಿ ಈ ದಿನ ಮತ್ತೆ ಪರಿಚಯಿಸಲಾದ ರೀತಿಯಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿರುವುದು ನಾಗರಿಕ ವಲಯದಲ್ಲಿ ಹಲವು ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾದಂತಿದ್ದು ಪೊಲೀಸ್ ತನಿಖೆಯಿಂದ ನಿಖರ ಮಾಹಿತಿಗಳು ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ

Back to top button