![](http://i0.wp.com/vismaya24x7.com/wp-content/uploads/2020/07/corona-uttara-kannada.jpg?fit=1280%2C809&ssl=1)
ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
ಶಿರಸಿಯಲ್ಲಿ ಹೆಚ್ಚಿದ ಆತಂಕ
ಶಿರಸಿ: ಕಿಲ್ಲರ್ ಕರೊನಾ ಮಹಾಮಾರಿ ಶಿರಸಿಯಲ್ಲಿ ಮೊದಲ ಬಲಿ ಪಡೆದಿದೆ. ಶಿರಸಿ ತಾಲೂಕಿನ ಬಾಳಗಾರಿನ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಕಾರವಾರದಲ್ಲಿ ಸಾವನ್ನಪ್ಪಿದ್ದಾನೆ.
ಬೆಂಗಳೂರಿನಿಂದ ಬಂದು ಶಿರಸಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗೆ ಸೋಂಕು ದೃಢಪಟ್ಟಿತ್ತು. ಈತನ ಆರೋಗ್ಯ ಬಿಗಡಾಯಿಸಿದ ಹಿನ್ನಲೆಯಲ್ಲಿ ತಕ್ಷಣ ಇಂದು ಶಿರಸಿಯಿಂದ ಕಾರವಾರದ ಕರೊನಾ ವಾರ್ಡ್ ಗೆ ದಾಖಲಿಸಲಾಗಿತ್ತು. ಆದರೆ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
![](http://i0.wp.com/vismaya24x7.com/wp-content/uploads/2020/07/Screenshot_20200706_215622.jpg?resize=708%2C834&ssl=1)
ವಿಸ್ಮಯ ನ್ಯೂಸ್ ಶಿರಸಿ