Follow Us On

WhatsApp Group
Focus News
Trending

ಕಾಲುವೆಯಲ್ಲಿ ಬಿದ್ದು ಸಾವನ್ನಪ್ಪಿದ ಬಾಲಕನ ಕುಟುಂಬಕ್ಕೆ 5 ಲಕ್ಷ ಪರಿಹಾರ ಒದಗಿಸಿದ ಶಾಸಕ ಸುನೀಲ್ ನಾಯ್ಕ : ಕುಟುಂಬದವನ್ನು ಭೇಟಿ ಮಾಡಿ ಆದೇಶ ಪ್ರತಿ ಹಸ್ತಾಂತರ

ಭಟ್ಕಳ: ನೀರು ಹರಿಯುವ ಕಾಲುವೆಗೆ ಬಿದ್ದು ಸಾವನ್ನಿಪ್ಪದ ಬಾಲಕನ ಕುಟುಂಬಕ್ಕೆ ಶಾಸಕ ಸುನೀಲ ನಾಯ್ಕ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ಮಂಜೂರಿ ಮಾಡಿಸಿ ಅದರ ಪತ್ರಿಯನ್ನು ಕುಟುಂಬಕ್ಕೆ ಹಸ್ತಾಂತರಿಸಿದರು . ಕಳೆದ ಮೇ 20 ರಂದು ಸುರಿದ ಬಾರಿ ಮಳೆಗೆ ಪಡುಶಿರಾಲಿಯಲ್ಲಿ ವಿಜೇತ ಗಣಪತಿ ನಾಯ್ಕ ಎಂಬ 4 ವರ್ಷಬಾಲಕ ಅಂಗನವಾಗಿ ಹೋಗಿ ಬಂದು ತನ್ನ ಮನೆಯ ಹಿಂಬದಿಯಲ್ಲಿ ಆಟವಾಡುತ್ತಿದ್ದ ವೇಳೆ ಅಲ್ಲೇ ಪಕ್ಕದಲ್ಲಿರುವ ಕಾಲುಗೆ ಬಿದ್ದು ಸಾವನ್ನಪ್ಪಿದ್ದನು.

ಅಂದು ಶಾಸಕ ಸುನೀಲ ನಾಯ್ಕ ಶವಾಗರಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನವನ್ನು ಹೇಳುವುದರೊಂದಿಗೆ ಪರಿಹಾರಕ್ಕಾಗಿ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳು ದಾಗಿ ಭರವಸೆ ನೀಡಿದ್ದರು. ಅದರಂತೆ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರವನ್ನು ಮಂಜೂರು ಮಾಡಿಸಿ ಇಂದು ಮೃತ ಬಾಲಕನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಆದೇಶ ಪ್ರತಿಯನ್ನು ಹಸ್ತಾಂತರಿಸಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button