Important
Trending

ದೋಣಿ ಮುಗಿಚಿ ಓರ್ವ ವ್ಯಕ್ತಿ ನಾಪತ್ತೆ: ಇಬ್ಬರ ರಕ್ಷಣೆ:ಫ್ರೀ ವೆಡ್ಡಿಂಗ್ ಶೂಟಿಂಗ್ ಬೋಟಿನ ಓಡಾಟದ ವೇಗಕ್ಕೆ ಮುಗುಚಿತೇ ದೋಣಿ?

ಹೊನ್ನಾವರ: ತಾಲೂಕಿನ ನಗರೆ ಮತ್ತು ಮಾವಿನಕುರ್ವಾಕ್ಕೆ ಶರಾವತಿ ನದಿಯಲ್ಲಿ ದೋಣಿ ಮೂಲಕ ಸಾಗುವಾಗ ದೋಣಿ ಮುಗುಚಿ ದುರಂತ ಸಂಭವಿಸಿದೆ. ಇದೇ ನದಿಯಲ್ಲಿ ಫ್ರೀ ವೆಡ್ಡಿಂಗ್ ಶೂಟಿಂಗ್ ಬೋಟಿನ ಓಡಾಟದ ವೇಗಕ್ಕೆ ದೋಣಿ ಮುಗಿಚಿದೆ ಎನ್ನಲಾಗುತ್ತಿದೆ.

ದೋಣಿಯಲ್ಲಿದ್ದ ಮಾವಿನಕುರ್ವಾ ಗ್ರಾಮ ಪಂಚಾಯತ ಸದಸ್ಯ ಪೀಟರ್ ಮೆಂಡಿಸ್ಸಾ, ಜೆಲ್ವಿನ್ ಡಯಾಸ್ ಇವರನ್ನು ಇದೇ ಗ್ರಾಮದ ಬೆಸ್ತಾಂವ್ ಎನ್ನುವವರು ಹೊಳೆಗೆ ಧುಮುಕಿ ರಕ್ಷಣೆ ಮಾಡಿದ್ದಾರೆ.

ಆದರೆ ಪ್ರಕಾಶ ಫರ್ನಾಂಡಿಸ್ ನದಿಯಲ್ಲಿ ಬಿದ್ದು ನಾಪತ್ತೆಯಾಗಿದ್ದಾರೆ. ಸ್ಥಳೀಯರ ಸಹಕಾರದಿಂದ ಪೊಲೀಸರು ನಾಪತ್ತೆಯಾದ ವ್ಯಕ್ತಿಯ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ವಿಸ್ಮಯ ನ್ಯೂಸ್ ಶ್ರೀಧರ್ ‌ನಾಯ್ಕ ಹೊನ್ನಾವರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button