ಮೀನುಗಾರಿಕೆಗೆ ತೆರಳಿದ್ದ ಯುವಕನ ಮೃತದೇಹ ಪತ್ತೆ: ಸಮುದ್ರದಲ್ಲಿ ಬಿದ್ದು ನೀರುಪಾಲು: ಮಾಂಗಟೇಶ್ವರ ಗುಡ್ಡದ ಬಳಿ ನಡೆದ ಸಮುದ್ರ ಅವಘಡ

ಅಂಕೋಲಾ: ಮೀನುಗಾರಿಕೆಗೆ ತೆರಳಿದ್ದ ಯುವಕನೋರ್ವ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಅಂಕೋಲಾದಲ್ಲಿ  ಸಂಭವಿಸಿದೆ.     ಗಾಬಿತ ಕೇಣಿಯ ಅಂಕುಶ ರಾಮದಾಸ ಅಂಕೋಲೆಕರ (35) ಮೃತ ದುರ್ದೈವಿಯಾಗಿದ್ದು, ಈತನು ಸೋಮವಾರ, ಸ್ಥಳೀಯ ಮಾಂಗಟೇಶ್ವರ ಗುಡ್ದದ ಬಳಿ ತೆರಳಿ, ಬೀಸು ಬಲೆ (ಕೈ ಬಲೆ ) ಬಳಸಿ ಮೀನುಗಾರಿಕೆ ನಡೆಸುತ್ತಿದ್ದಾಗ,ಆಕಸ್ಮಿಕವಾಗಿ  ಸಮುದ್ರದಲ್ಲಿ ಬಿದ್ದು ನೀರಿನ ಪಾಲದ ಎನ್ನಲಾಗಿದೆ.ಮಂಗಳವಾರ ದೋಣಿಯ ಮೂಲಕ ಮೀನುಗಾರಿಕೆಗೆ ತೆರಳಿದ್ದ ಕೆಲವರು ಸಮುದ್ರದಲ್ಲಿ ಶವವೊಂದು  ತೇಲುತ್ತಿರುವುದನ್ನು ಗಮನಿಸಿದ್ದಾರೆ.

ಸುದ್ದಿ ತಿಳಿಯುತ್ತಲೇ ಬೆಲೆಕೇರಿಯ ಕರಾವಳಿ ಕಾವಲು ಪಡೆ ಹಾಗೂ ಅಂಕೋಲಾ ಪೋಲೀಸ ಸಿಬ್ಬಂದಿಗಳು ಹಾಜರಾಗಿ , ಸ್ಥಳೀಯರ ಸಹಕಾರದಲ್ಲಿ ಶವವನ್ನು ನೀರಿನಿಂದ ಮೇಲೆತ್ತಿ, ಮರಣೋತ್ತರ ಪರೀಕ್ಷೆಗಾಗಿ. ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ವಾಯ್ ನಾಯ್ಕ ಸಹಕರಿಸಿದರು. ಪಿಎಸ್ಐ ಮಹಾಂತೇಶ ವಾಲ್ಮೀಕಿ  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಿಬ್ಬಂದಿಗಳಾದ ಮೋಹನದಾಸ ಶೆಣ್ಪಿ, ಇತರ ಸಿಬ್ಬಂದಿಗಳು ಹಾಜರಿದ್ದರು.                     

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version