Focus NewsImportant
Trending
ಮಗುವಿನ ಮೇಲೆ ನಾಯಿ ದಾಳಿ: ಮನೆ ಪ್ರವೇಶಿಸುತ್ತಿರುವಾಗ ಏಕಾಏಕಿ ಎರಗಿದ ಶ್ವಾನ: ಇನ್ನೂ ಇಬ್ಬರ ಮೇಲೆ ದಾಳಿ

ಭಟ್ಕಳ: ಒಂದೂವರೆ ವರ್ಷದ ಮಗುವಿನ ಮೇಲೆ ನಾಯಿ ದಾಳಿ ನಡೆಸಿತ್ತು. ಅದಾದ ಬಳಿಕ ಇನ್ನೂ ಇಬ್ಬರ ಮೇಲೆ ನಾಯಿ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
- ಅಕ್ಕನ ಅಂತಿಮ ಕಾರ್ಯ ಮುಗಿಸಿಕೊಂಡು ಮನೆಗೆ ವಾಪಸಾಗುತ್ತಿದ್ದ ತಮ್ಮನ ದುರ್ಮರಣ: ಏನಾಯ್ತು ನೋಡಿ?
- ಕೇಣಿ ವಾಣಿಜ್ಯ ಬಂದರು ವಿರೋಧಿ ಹೋರಾಟ ಸಮಿತಿಯಿಂದ ಮಹತ್ವದ ಹೇಳಿಕೆ : ಮೀನುಗಾರಿಕಾ ಮಂತ್ರಿಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವರೇ ಖುದ್ದಾಗಿ ಬಂದು ಅಹವಾಲು ಆಲಿಸಲು ಆಗ್ರಹ
- ರೈತರಿಗೆ ಬೆಳೆವಿಮೆ ಕೊಡಿ: ಕಂಪೆನಿಗೆ ಕೇಂದ್ರದ ಖಡಕ್ ಆದೇಶ
ತಕಿಯಾ ಸ್ಟ್ರೀಟ್ನ ಇಮ್ರಾನ್ ಖುಶಾಲ್ ತನ್ನ ಕುಟುಂಬದೊಂದಿಗೆ ನವಾಯತ್ ಕಾಲೋನಿ ಮದುವೆ ಮಂಟಪದಲ್ಲಿ ರಾತ್ರಿ ಸುಮಾರು ಎಂಟು ಘಂಟೆಗೆ ಆಟೋರಿಕ್ಷಾದಿಂದ ಇಳಿದು ಪ್ರವೇಶಿಸುತ್ತಿದ್ದಾಗ ನಾಯಿಯೊಂದು ದಾಳಿ ಮಾಡಿದೆ. ನಾಲ್ಕು ವರ್ಷದ ಮಗ ಬಿಲಾಲ್ ಮೇಲೆ ದಾಳಿ ಮಾಡಿದ್ದು, ಬಾಲಕನ ಮುಖಕ್ಕೆ ಗಾಯಗಳಾಗಿವೆ.
ನಾಯಿಯ ಹಿಡಿತದಿಂದ ಮಗುವನ್ನು ರಕ್ಷಿಸುವ ಯತ್ನದಲ್ಲಿ ಯುವಕ ಅಸೀಮ್ನ ಮೇಲೂ ನಾಯಿ ದಾಳಿ ಮಾಡಿದ್ದು, ಅಸೀಮ್ಗೂ ನಾಯಿ ಕಚ್ಚಿದೆ ಎಂದು ವರದಿಯಾಗಿದೆ. ಇಬ್ಬರಿಗೂ ಹತ್ತಿರದ ಆಸ್ಪತ್ರೆಯಿಂದ ಅಗತ್ಯ ಚುಚ್ಚುಮದ್ದು ನೀಡಲಾಗಿದೆ.
ವಿಸ್ಮಯ ನ್ಯೂಸ್ , ಉದಯ್ ಎಸ್ ನಾಯ್ಕ ಭಟ್ಕಳ