ತೋಟಕ್ಕೆ ಹೋದ ರೈತ ಶವವಾಗಿ ಪತ್ತೆ: ಹಳ್ಳಕ್ಕೆ ಜಾರಿಬಿದ್ದು ಸಾವು

ಸಿದ್ದಾಪುರ: ತೋಟಕ್ಕೆ ಹೋದ ರೈತ ಶವವಾಗಿ ಪತ್ತೆಯಾದ ಘಟನೆ ತಾಲೂಕಿನ ಕಾನಸೂರ ಸಮೀಪದ ತಾರೀಸರದ ಬಳಿ ನಡೆದಿದೆ. ಪರಮೇಶ್ವರ ಕೃಷ್ಣಪ್ಪ ಹೆಗಡೆ ಮೃತಪಟ್ಟ ರೈತನಾಗಿದ್ದಾನೆ. ತೋಟಕ್ಕೆ ಹೋದಾಗ ಕಾಲು ಸಂಕ ದಾಟುವಾಗ ಜಾರಿ ಹಳ್ಳಕ್ಕೆ ಬಿದ್ದು ಮೃತಪಟ್ಟಿದ್ದಾನೆ. ಬಿದ್ದ ಜಾಗದಿಂದ ಸುಮಾರು 200 ಮೀಟರ್ ದೂರದಲ್ಲಿ ಮೃತದೇಹ ತೇಲಿ ಬಂದಿದೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Exit mobile version