Follow Us On

Google News
Important
Trending

ನಾಡದೋಣಿಯಲ್ಲಿ ಕುಸಿದು ಮೀನುಗಾರ ಸಾವು: ಬಲೆ ಬೀಸುವ ವೇಳೆ ದುರಂತ

ಸಂಬoಧಿಗಳ ಜೊತೆ ಮೀನುಗಾರಕೆಗೆ ತೆರಳಿದ್ದ ವೇಳೆ ಅನಾಹುತ

ಹೊನ್ನಾವರ: ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಸಂದರ್ಭದಲ್ಲಿ ಮೀನುಗಾರ ದೋಣಿಯಲ್ಲಿ ಕುಸಿದು ಮೃತಪಟ್ಟ ಘಟನೆ ಮಂಕಿಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಗಣಪತಿ ನಾಗಪ್ಪ ಖಾರ್ವಿ(51 ವರ್ಷ)ಎಂದು ಗುರುತಿಸಲಾಗಿದೆ.

ಸಂಬಂಧಿಗಳ ಜೊತೆ ನಾಡದೋಣಿಯಲ್ಲಿ ಸಮುದ್ರಕ್ಕೆ ಈತ ಮೀನುಗಾರಿಕೆಗೆ ತೆರಳಿದ್ದ. ಈ ವೇಳೆ ಸಮುದ್ರದಲ್ಲಿ ಬಲೆ ಬೀಡುವ ಸಂದರ್ಭದಲ್ಲಿ ಗಣಪತಿ ನಾಗಪ್ಪ ಖಾರ್ವಿ ಈತನು ಕುಸಿದು ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿ ಹೆಂಡತಿ ಹಾಗೂ ಮೂವರು ಚಿಕ್ಕ ಮಕ್ಕಳನ್ನು ಅಗಲಿದ್ದಾನೆ.

ವಿಸ್ಮಯ ನ್ಯೂಸ್ ,‌ಶ್ರೀಧರ್ ನಾಯ್ಕ ಹೊನ್ನಾವರ

Back to top button