![](http://i0.wp.com/vismaya24x7.com/wp-content/uploads/2020/07/surgical-mask.jpg?fit=626%2C417&ssl=1)
ಶಿರಸಿ: ತಾಲೂಕಿನಲ್ಲಿ ದಿನೇ ದಿನೇ ಕರೊನಾ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಬುಧವಾರ ಒಟ್ಟು 7 ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಪ್ರಮುಖ ಬ್ಯಾಂಕ್ವೊಂದರ ಪ್ರಧಾನ ಶಾಖೆಯ ಸಿಬ್ಬಂದಿಗೆ ಈ ಮೊದಲು ಪಾಸಿಟಿವ್ ಬಂದಿತ್ತು. ಇಂದು ಇದೇ ಬ್ಯಾಂಕ್ ಶಾಖೆಯ ಮೂವರು ನೌಕರರಿಗೆ ಕರೊನಾ ದೃಢಪಟ್ಟಿದೆ ಎಂಬ ಮಾಹಿತಿ ಬಂದಿದೆ. ಇದರ ಜೊತೆಗೆ ಎನ್ಜಿಒ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಸಿಬ್ಬಂದಿಗೂ ಸೋಂಕು ತಗುಲಿದ ಮಾಹಿತಿ ಬಂದಿದೆ. ಇನ್ನು ಹಲವು ವರದಿ ಬರಬೇಕಿದ್ದು, ತಾಲೂಕಿನ ಜನರಲ್ಲಿ ಆತಂಕ ಶುರುವಾಗಿದೆ. ಸಂಜೆಯ ಹೆಲ್ತ್ ಬುಲೆಟಿನ್ನಲ್ಲಿ ಈ ಕುರಿತ ನಿಖರ ಮಾಹಿತಿ ಹೊರಬೀಳಲಿದೆ.
ವಿಸ್ಮಯ ನ್ಯೂಸ್, ಶಿರಸಿ
ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)