Uttara Kannada
Trending

ಜಿಲ್ಲೆಯಲ್ಲಿಂದು ಅರ್ಧ ಶತಕದ ಸನಿಹ ಕರೊನಾ?

ಯಲ್ಲಾಪುರ: 14
ಕುಮಟಾ: 5
ಶಿರಸಿ: 7
ಹಳಿಯಾಳ: 12

ಕಾರವಾರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂದು 45 ಜನರಿಗೆ ಸೋಂಕು ದೃಢಪಟ್ಟಿದೆ ಎಂಬ ಮಾಹಿತಿ ಬಂದಿದೆ. ಯಲ್ಲಾಪುರದಲ್ಲಿ ಇಂದು ಅತಿಹೆಚ್ಚು ಅಂದರೆ 14 ಪ್ರಕರಣ ದಾಖಲಾಗಿದೆ. ಉಳಿದಂತೆ ಕುಮಟಾದಲ್ಲಿ 5, ಶಿರಸಿಯಲ್ಲಿ 7 ಪ್ರಕರಣ, ಹಳಿಯಾಳದಲ್ಲಿ 12 ಪ್ರಕರಣ ದೃಢಪಟ್ಟಿದೆ. ಭಟ್ಕಳದಲ್ಲೂ ಒಂದು ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು, 50 ಸಮೀಪ ಬಂದರೂ ಅಚ್ಚರಿಯಿಲ್ಲ.

ಕುಮಟಾದಲ್ಲಿಂದು ಐವರಲ್ಲಿ ಸೋಂಕು ಪತ್ತೆ:

ಕುಮಟಾ ತಾಲೂಕಿನ ಹೆರವಟ್ಟಾದ 76 ವರ್ಷದ ಮಹಿಳೆ, ಮತ್ತು ಮಿರ್ಜಾನಿನ 71 ವರ್ಷದ ಮಹಿಳೆ, ಗೋಕರ್ಣದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ, ಖಾಸಗಿ ವೈದ್ಯರ ಕುಟುಂಬದವರ 64 ವರ್ಷ ಮಹಿಳೆ ಮತ್ತು ಉಪ್ಪಿನಗಣಪತಿಯ 34 ವರ್ಷದ ಪುರುಷನಿಗೂ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.

ಶಿರಸಿಯಲ್ಲಿ ಏಳು ಪಾಸಿಟಿವ್?

ಶಿರಸಿಯಲ್ಲಿ ಬ್ಯಾಂಕ್‍ವೊಂದರ ಮುಖ್ಯಕಚೇರಿಗೂ ಸೋಂಕು ವ್ಯಾಪಿಸಿದೆ ಎನ್ನಲಾಗಿದೆ.

ನಿಖರ ಅಂಕಿ-ಸಂಖ್ಯೆ ಮತ್ತು ಸಂಪೂರ್ಣ ಮಾಹಿತಿ ಸಂಜೆಯ ಹೆಲ್ತ್ ಬುಲೆಟಿನ್‍ನಲ್ಲಿ ಪ್ರಕಟವಾಗಲಿದ್ದು, ಅಧಿಕೃತ ಮಾಹಿತಿ ಹೊರಬೀಳಲಿದೆ.

ಈ ಕುರಿತ ಹೆಚ್ಚಿನ ಮಾಹಿತಿಯನ್ನು ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್‍ನಲ್ಲಿ ವೀಕ್ಷಿಸಿ

[sliders_pack id=”1487″]

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button