Focus NewsImportant
Trending

ನಾರಾಯಣ ಭಾಗ್ವತ್ ಅವರಿಗೆ ಅತ್ಯುತ್ತಮ ಶಿಕ್ಷಕ ರಾಜ್ಯಪ್ರಶಸ್ತಿ ಪ್ರಕಟ: ಕಳೆದ 31 ವರ್ಷದಿಂದ ಶಿಕ್ಷಕರಾಗಿ ಸೇವೆ ಸಲ್ಲಿಕೆ

ಶಿರಸಿ: ಇಲ್ಲಿನ ಮಾರಿಕಾಂಬಾ ಸರಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ನಾರಾಯಣ ಭಾಗ್ವತ್ ಅವರಿಗೆ ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಪ್ರಕಟವಾಗಿದೆ. ಶಿಕ್ಷಣ ಕ್ಷೇತ್ರ ಮಾತ್ರವದಲ್ಲದೆ, ರಂಗಭೂಮಿ, ಸಾಹಿತ್ಯ ಚಟುವಟಿಕೆಗಳಲ್ಲೂ ನಾರಾಯಣ ಭಾಗ್ವತ್ ಅವರು ಸಕ್ರೀಯವಾಗಿ ತೊಡಗಿಕೊಂಡಿದ್ದು, ಉತ್ತಮ ಶಿಕ್ಷಕರಾಗಿ ಹೆಸರುಗಳಿಸಿದ್ದರು. ಮೂಲತ: ಕುಮಟಾ ತಾಲೂಕಿನ ಹಂದಿಗೋಣ ಗ್ರಾಮದ ನಾರಾಯಣ ಭಾಗ್ವತ್ ಅವರು ಕಳೆದ 31 ವರ್ಷದಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿಸುತ್ತಿದ್ದಾರೆ.

ಸಾವಿಗೆ ಮುನ್ನ ವಿಡಿಯೋ ಮಾಡಿ ಬಿಡುಗಡೆ: ಮರಕ್ಕೆ ನೇಣು ಬಿಗಿದು ಕೊಂಡು ಮೃತಪಟ್ಟ ಯುವಕ ? ವಿಡಿಯೋದಲ್ಲಿ ಏನಿದೆ ನೋಡಿ?

50ಕ್ಕೂ ಅಧಿಕ ಮಕ್ಕಳ ನಾಟಕ ನಿರ್ದೇಶನ, 15 ಕ್ಕೂ ಅಧಿಕ ಶಿಕ್ಷಕರಿಗೆ ನಾಟಕ ನಿರ್ದೇಶನ ಮಾಡಿದ್ದಾರೆ. ಅಲ್ಲದೆ, ಸುಮಾರು 25 ವರ್ಷಗಳಿಗೂ ಅಧಿಕ ಕಾಲ ಗ್ರಾಮೀಣ ಭಾಗದಲ್ಲಿ ಬೋಧನೆ ಮಾಡಿದ್ದು, ಚಿತ್ರ ರಚನೆ, ನಿರ್ದೇಶನ, ಗಾಯನ, ಬೇಸಿಗೆ ಶಿಬಿರ, ಮೇಕಪ್, ವೇಷಭೂಷಣ, ಕಾವ್ಯ, ನಾಟಕ ಹೀಗೆ ಅನೇಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಕೊಂಡಿದ್ದಾರೆ. ತಾಲೂಕು, ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಣ ಪ್ರಶಸ್ತಿ ಜೊತೆಗೆ ರಾಜ್ಯ ಜ್ಞಾನ ಸಿಂಧು, ನೇಶನ್ ಬಿಲ್ಡರ್, ಮಕ್ಕಳ ರಂಗಭೂಮಿ ಸೇವೆಗಾಗಿ ಕಸಾಪ ಪ್ರಶಸ್ತಿ, ಲಾಕ್ ಡೌನ್ ಕಾಲದಲ್ಲಿ ಮಕ್ಕಳಿಗೆ ಇ-ಲರ್ನಿಂಗ್, ಮಕ್ಕಳ ಕಲಿಕೆಗೆ ಬ್ಲಾಗ್ ರಚನೆಯಲ್ಲಿ ಕೂಡ ತೊಡಗಿಕೊಂಡು ಗಮನ ಸೆಳೆದಿದ್ದಾರೆ ನಾರಾಯಣ ಭಾಗ್ವತ್ ಅವರು.

ವಿಸ್ಮಯ ನ್ಯೂಸ್, ಶಿರಸಿ

Back to top button