Join Our

WhatsApp Group
Big NewsImportant
Trending

ಗೋಕರ್ಣದ ಪ್ರಸಿದ್ದ ಬೀಚ್ ನಲ್ಲಿ ಸಮುದ್ರದ ಸುಳಿಗೆ ಸಿಲುಕಿ ಮುಳುಗುತ್ತಿದ್ದ ಚಿತ್ರನಟ: ಜೀವ ಉಳಿಸಿದ ಲೈಫ್ ಗಾರ್ಡ್ ಸಿಬ್ಬಂದಿ

ಸಮುದ್ರದ ಸುಳಿಗೆ ಸಿಲುಕಿ ಒದ್ದಾಡುತ್ತಿದ್ದ ಚಿತ್ರನಟ

ಗೋಕರ್ಣ: ಸಮುದ್ರಕ್ಕೆ ಈಜಲು ತೆರಳುವ ಪ್ರವಾಸಿಗರು ಜೀವಕ್ಕೆ ಕುತ್ತು ತಂದುಕೊಳ್ಳುತ್ತಿರುವ ಪ್ರಕರಣ ಇತ್ತಿಚಿಗೆ ಹೆಚ್ಚುತ್ತಿದೆ. ಹೌದು, ಪ್ರಸಿದ್ಧ ಪ್ರವಾಸಿತಾಣ ಗೋಕರ್ಣದ ಕುಡ್ಲೆ ಬೀಚ್ ಗೆ ಈಜಲು ಹೋಗಿದ್ದ ಚಿತ್ರನಟ ಸುಳಿಗೆ ಸಿಲುಕಿ‌ ಮುಳುಗುತ್ತಿದ್ದ.ಇದನ್ನು ಗಮನಿಸಿದ ಗೋಕರ್ಣ ಅಡ್ವೆಂಚರ್ ಸಂಸ್ಥೆಯ ಸಿಬ್ಬಂದಿ ಮತ್ತು ಲೈಪ್ ಗಾರ್ಡ್ ಸಿಬ್ಬಂದಿ ರಕ್ಷಣೆಗೆ ಧಾವಿಸಿದ್ದಾರೆ.

ಸೇಫ್ ಆಗಿ ರೀಚ್ ಆದೆ ಎಂದು ಮಗನಿಗೆ ಮೆಸೇಜ್ ಮಾಡಿದ್ದರೂ ವಿಮಾನದಿಂದ ಇಳಿಯುತ್ತಿದ್ದಾಗ ವಿಧಿಯಾಟಕ್ಕೆ ಶರಣು: ಏನಾಯ್ತು ನೋಡಿ?

ಹೈದ್ರಬಾದ್ ಮೂಲದ ಚಿತ್ರನಟ ಅಖಿಲ್ ರಾಜ್ (26) ರಕ್ಷಣೆಗೊಳಗಾದ ನಟ. ಸಮುದ್ರದಲ್ಲಿ ಈಜಲು ಹೋದಾಗ ಸುಳಿಯಲ್ಲಿ ಸಿಲುಕಿದ್ದು, ಜೀವಕ್ಕೆ ಆಪತ್ತು ತಂದುಕೊಂಡಿದ್ದರು. ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದವನನ್ನು ವಾಟರ್ ಬೈಕ್ ಮೂಲಕ ತೆರಳಿ ರಕ್ಷಿಸಿದ್ದಾರೆ.

ವಿಸ್ಮಯ ನ್ಯೂಸ್ ಗೋಕರ್ಣ

Back to top button