![](http://i0.wp.com/vismaya24x7.com/wp-content/uploads/2022/11/honnavar-death.jpg?fit=1600%2C720&ssl=1)
ಹೊನ್ನಾವರ: ಇಲ್ಲಿನ ತೊಟ್ಟಿಲಗುಂಡಿಯಲ್ಲಿ ಆಸ್ತಿ ವಿಷಯಕ್ಕೆ ನಡೆದ ಕೊಲೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳು ಕೊನೆಗೂನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಕೊಲೆ ಆರೋಪಿಗಳಾದ ವಿನಾಯಕ ನಾಯ್ಕ, ಚಿದಂಬರ ನಾಯ್ಕ ಹಾಗೂ ಮಂಜುನಾಥ ನಾಯ್ಕ ನ್ಯಾಯಾಧೀಶರ ಮುಂದೆ ಶರಣಾಗಿದ್ದಾರೆ.
ವೈಯಕ್ತಿಕ ದ್ವೇಷ: ಮಹಿಳೆ ಮೇಲೆ ಹಲ್ಲೆ: 12 ಜನರ ವಿರುದ್ಧ ದೂರು
ನವೆಂಬರ್ 5ರಂದು ಆಸ್ತಿ ವಿಷಯದ ಕುರಿತು ಸಹೋದರರ ನಡುವೆ ನಡೆದ ಕಲಹದಲ್ಲಿ ಹನುಮಂತ ನಾಯ್ಕ ಮೃತಪಟ್ಟಿದ್ದ. ಇನ್ನೊರ್ವ ಮಾರುತಿ ನಾಯ್ಕ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆಗೆ ಸಂಬoಧಿಸಿದ ನಾಲ್ವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ
![](http://i0.wp.com/vismaya24x7.com/wp-content/uploads/2022/08/nityadhar-new-1.jpg?resize=708%2C398&ssl=1)