Important
Trending

ಆಕಸ್ಮಿಕವಾಗಿ ಬಾವಿಗೆ ಬಿದ್ದು ವೃದ್ಧ ಸಾವು

ಕುಮಟಾ: ಆಕಸ್ಮಿಕವಾಗಿ ಬಾವಿಗೆ ಬಿದ್ದ ವೃದ್ಧ, ಕೆಸರಿನಲ್ಲಿ ಕಾಲು ಹುಗಿದು ಹೋಗಿದ್ದರಿಂದ ಅಲ್ಲಿಯೇ ಮೃತಪಟ್ಟ ಘಟನೆ ಹಳೇ ಹೆರವಟ್ಟಾದ ಶ್ರೀ ಸಾಣಿಯಮ್ಮ ದೇವಸ್ಥಾನ ಸಮೀಪ ನಡೆದಿದೆ. ಮನೆಯ ಬಳಿಯ ಬಾವಿಯಲ್ಲಿ ನೀರು ತೆಗೆಯುವಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ಈ ದುರಂತ ಸಂಭವಿಸಿದೆ. ಮೃತವೃದ್ಧನನ್ನು ಶ್ರೀ ಸಾಣಿಯಮ್ಮ ದೇವಸ್ಥಾನ ಸಮೀಪದ ನಿವಾಸಿ ನಾಗಪ್ಪ ನಾಗು ಗೌಡ (65) ಎಂದು ಗುರುತಿಸಲಾಗಿದೆ. ಮಾಹಿತಿ ಪಡೆದ ಅಗ್ನಿ ಶಾಮಕ ದಳವು ಸ್ಥಳಕ್ಕೆ ಧಾವಿಸಿ, ಶವವನ್ನು ಬಾವಿಯಿಂದ ಮೇಲೆತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ ಎಂದು ತಿಳಿದುಬಂದಿದೆ.

ವಿಸ್ಮಯ ನ್ಯೂಸ್, ಕುಮಟಾ

Related Articles

Back to top button