ಶ್ರೀ ಕ್ಷೇತ್ರ ಧಾರೇಶ್ವರದಲ್ಲಿ ಕಾರ್ತಿಕ ದೀಪೋತ್ಸವ: ರಥಬೀದಿಯವರೆಗೂ ಬೆಳಗಿತು ಸಹಸ್ರಾರು ದೀಪ

ಧಾರಾನಾಥನಿಗೆ ಲಕ್ಷಕ್ಕೂ ಅಧಿಕ ಬಿಲ್ವಪತ್ರೆ ಅರ್ಪಿಸಿ ರಾಜೋಪಚಾರ ಸೇವೆ

ಕುಮಟಾ: ಶ್ರೀ ಕ್ಷೇತ್ರ ಧಾರೇಶ್ವರ ಮ್ಹಾತೋಬಾರ ಶ್ರೀ ಧಾರಾನಾಥ ದೇವಸ್ಥಾನದಲ್ಲಿ ವಾರ್ಷಿಕವಾಗಿ ಕಾರ್ತಿಕ ಅಮಾವಾಸ್ಯೆಯಂದು ವಿಶೇಷ ಲಕ್ಷ ಬಿಲ್ವಾರ್ಚನೆ, ದೀಪೋತ್ಸವ, ರಥೋತ್ಸವಾದಿ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ ಶ್ರೀ ದೇವರ ಪ್ರೀತ್ಯರ್ಥವಾಗಿ ಹವನಗಳು ಹಾಗೂ ನಂತರ ಪಂಚಾಮೃತ, ಏಕಾದಶ ರುದ್ರ, ನವಧಾನ್ಯ ಅಭಿಷೇಕ ಗಳು ನಡೆದವು. ನಂತರ ಒಂದು ಲಕ್ಷಕ್ಕೂ ಅಧಿಕ ಬಿಲ್ವಪತ್ರೆ ಗಳನ್ನು ಶಿವನಿಗೆ ಅರ್ಪಿಸಿ ರಾಜೋಪಚಾರ ಸೇವೆಯೊಂದಿಗೆ ಮಹಾಪೂಜೆ ಸಂಪನ್ನಗೊoಡಿತು. ಈ ಕಾರ್ಯಗಳನ್ನು ದೇವಾಲಯದ ಅರ್ಚಕರುಗಳು ಹಾಗೂ ಉಪಾಧಿವಂತರು ನಡೆಸಿದರು.

ಸ್ಕೂಟಿ ಮತ್ತು ಬೈಕ್ ನಡುವೆ ಅಪಘಾತ : ಬೈಕ್ ಸವಾರ ಸಾವು

ದೇವಸ್ಥಾನದ ಒಳ- ಹೊರ ಪ್ರಾಂಗಣದಿoದ ರಥಬೀದಿಯ ವರೆಗೂ ಸಹಸ್ರಾರು ದೀಪಗಳನ್ನು ಬೆಳಗಿಸಿದರು. ದೇವಾಲಯದ ಶಿಖರದ ಮೇಲೆ ಕುಂಬಳಕಾಯಿಯ ವಿಶೇಷ ದೀಪ ಬೆಳಗಿಸುವ ಸಂಪ್ರದಾಯವೂ ಇಲ್ಲಿಯ ವೈಶಿಷ್ಟ. ಅಂತೆಯೇ ರಥೋತ್ಸವವೂ ಬಲು ಸಡಗರದಿಂದ ನಡೆಯಿತು. ಈ ಉತ್ಸವಗಳಿಗೆ ಊರಿನ ಹಾಗೂ ನೆರೆಯ ಊರುಗಳಿಂದ ಹಲವಾರು ಭಕ್ತರು ಬಂದು ದೇವರ ದರ್ಶನ ಪಡೆದರು. ದೀಪ ಬೆಳಗಿಸಿ ಇಷ್ಟಾರ್ಥಗಳನ್ನು ಪ್ರಾರ್ಥಿಸಿಕೊಂಡರು. ಸಿಡಿಮದ್ದುಗಳ ಪ್ರದರ್ಶನವೂ ಬಹಳ ಆಕರ್ಷಕವಾಗಿತ್ತು. ಬಂದoತಹ ಭಕ್ತಾದಿಗಳಿಗೆಲ್ಲ ಪ್ರಸಾದ ವಿತರಣೆಯೂ ಇತ್ತು.

ವಿಸ್ಮಯ ನ್ಯೂಸ್, ಕುಮಟಾ

Exit mobile version