Important

ದೇವಸ್ಥಾನದ ಪಕ್ಕದ ಹಳೆ ಅಂಗಡಿ ಮುಂದೆ ವ್ಯಕ್ತಿಯೋರ್ವನ  ಶವ ಪತ್ತೆ

ಅಂಕೋಲಾ: ಪಟ್ಟಣದ ಕಣಕಣೇಶ್ವರ ದೇವಸ್ಥಾನದ ಪಕ್ಕದ ಹಳೆಯ ಅಂಗಡಿಯೊಂದರ ಮುಂದೆ ವ್ಯಕ್ತಿಯೋರ್ವ ಶವವಾಗಿ ಪತ್ತೆಯಾಗಿರುವ ಘಟನೆ  ಶನಿವಾರ ನಡೆದಿದೆ.  ತಾಲೂಕಿನ ಮೂಲದವನಲ್ಲ ಎನ್ನಲಾದ ಈ ಮೃತ ದುರ್ದೈವಿ (ಗಣೇಶ ರಘುವೀರ ಪ್ರಭು )  ಅದಾವುದೋ ಕಾರಣದಿಂದ ಕುಟುಂಬದಿಂದ ದೂರ ಉಳಿದಿರುವ ಸಾಧ್ಯತೆ ಕೇಳಿ ಬಂದಿದ್ದು, ಕಳೆದ ಕೆಲ ಕಾಲದಿಂದ ಅಂಕೋಲಾದಲ್ಲಿ ಬಂದು ನೆಲೆಸಿದ್ದು, ಇತ್ತೀಚಿನ ದಿನಗಳಲ್ಲಿ ಕಣಕಣೇಶ್ವರ ದೇವಸ್ಥಾನದ ಪಕ್ಕದ ಹಳೆಯ ಅಂಗಡಿ ಮುಂಭಾಗದ ಖಾಲಿ ಜಾಗದಲ್ಲಿ  ಹೆಚ್ಚಿನ ಹೊತ್ತು ಕಳೆದು ರಾತ್ರಿ ವೇಳೆ ಇಲ್ಲೇ ಮಲಗುತ್ತಿದ್ದ ಎನ್ನಲಾಗಿದೆ.

ದೇವಸ್ಥಾನದ ಪಕ್ಕದ ಹಳೆ ಅಂಗಡಿ ಮುಂದೆ ವ್ಯಕ್ತಿಯೋರ್ವನ  ಶವ ಪತ್ತೆ

ಈತನಿಗೆ ಅಕ್ಕ ಪಕ್ಕದ ನಿವಾಸಿಗಳು, ದಾರಿಹೋಕರು, ಇತರರು ಆಗಾಗ ನೀರು, ಆಹಾರ ನೀಡಿ ಮಾನವೀಯತೆ ತೋರುತ್ತಿದ್ದರು. ಶುಕ್ರವಾರವೂ ಅದೇ ಸ್ಥಳದಲ್ಲಿ ಮಲಗಿದ್ದವನು ಬೆಳಗಾಗುವ ಹೊತ್ತಿಗೆ ಶವವಾಗಿ ಪತ್ತೆಯಾಗಿದ್ದು ಶನಿವಾರದ ಸಂತೆಯ ದಿನ ಬೆಳಿಗ್ಗೆ ಅದನ್ನು ಗಮನಿಸಿದ  ಸ್ಥಳೀಯರು ERSS 112 ತುರ್ತು ವಾಹನ ಸಿಬ್ಬಂದಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ಸ್ಥಳ ಮಹಜರು ನಡೆಸಿ ಕಾನೂನು ಕ್ರಮ ಮುಂದುವರೆಸಿದ್ದಾರೆ.

ಸ್ಥಳೀಯ ಚಿನ್ನದ ವರ್ತಕರೊಬ್ಬರು ಮೃತನನ್ನು ಗುರುತಿಸಿ  ಆತನ ಕುಟುಂಬಸ್ಥರಿಗೆ ಸುದ್ದಿ ತಲುಪಿಸಿದ್ದಾರೆ ಎನ್ನಲಾಗಿದ್ದು,ಅವರು ಅಂಕೋಲಾಕ್ಕೆ ಬಂದೊಡನೆ ಮತ್ತು ಪೊಲೀಸ್ ಇಲಾಖೆಯವರಿಂದ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ ಮೃತ  ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಘಟನಾ ಸ್ಥಳದಿಂದ  ತಾಲೂಕ ಆಸ್ಪತ್ರೆ ಶವಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ಕನಸಿಗದ್ದೆಯ ವಿಜಯಕುಮಾರ್ ನಾಯ್ಕ, ಹಾಗೂ ಸ್ಥಳೀಯರು ಸಹಕರಿಸಿದರು. ಪೋಲೀಸ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button