ಅಡಿಕೆಗೊನೆ ಕಳ್ಳತನ ಪ್ರಕರಣ: ನಾಲ್ವರ ಬಂಧನ

ಶಿರಸಿ: ಅಡಿಕೆಗೊನೆಯನ್ನೇ ಕಳವು ಮಾಡಿ ತಲೆಮರೆಸಿಕೊಂಡಿದ್ದ ನಾಲ್ವರನ್ನು ಬನವಾಸಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿಸೆಂಬರ್ 21 ರಂದು ಕೃಷಿಕ ಅಬ್ದುಲ್ ಕರೀಮ್ ಅವರ ತೋಟದಲ್ಲಿ ಮರ ಹತ್ತಿ ಅಡಕೆ ಗೊನೆಗಳನ್ನು ಕಳ್ಳತನ ಮಾಡಲಾಗಿತ್ತು. ಈ ಕುರಿತು ಬನವಾಸಿ ಠಾಣೆಯಲ್ಲಿ ದೂರು ದಾಖಲಿಸಲಾಗಿತು. ಚುರುಕು ಕಾರ್ಯಾಚರಣೆ ನಡೆಸಿರುವ ಪೊಲೀಸರು ಅಡಕೆ ಕದ್ದಿದ್ದ ನಾಲ್ವರನ್ನು ಮಾಲು ಸಮೇತ ಬಂಧಿಸಿದ್ದಾರೆ.

Recruitment 2022: ಕೇಂದ್ರ ಸರ್ಕಾರಿ ಉದ್ಯೋಗ : 400 ಉದ್ಯೋಗಾವಕಾಶ

ಭದ್ರಾವತಿಯ ನಿಂಬೆಗೊoದಿಯ ಅವಿನಾಶ ಮಂಜಪ್ಪ, ನರೇಂದ್ರ ಮಂಜಪ್ಪ, ಸಚಿನ ಶಿವಕುಮಾರ ಹಾಗೂ ಲೋಕೇಶ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಬಂಧಿತರಿoದ 36 ಸಾವಿರ ಮೌಲ್ಯದ ಅಡಿಕೆಯನ್ನು ಹಾಗೂ ಸಾಗಾಟಕ್ಕೆ ಬಳಸಲಾದ ಕಾರ್ ಅನ್ನು ಜಪ್ತಿ ಮಾಡಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version