ಬೈಕ್ ಸಾಲ ತೀರಿಸಲು ದರೋಡೆಗೆ ಇಳಿದ ಯುವಕರು: ಶೋಕಿಗಾಗಿ ಕಳ್ಳತನದ ಕಸುಬು

ಆತಂಕ ಮೂಡಿಸಿದ್ದ ದರೋಡೆಕೋರರು ಅಂದರ್

ಶಿರಸಿ: ಶಿರಸಿ ಹಾಗೂ ಬನವಾಸಿಭಾಗದಲ್ಲಿ ಬೈಕ್ ಸವಾರರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಮೂವರು ದರೋಡೆ ಕೋರರನ್ನು ಶಿರಸಿ ಗ್ರಾಮೀಣ ಠಾಣೆ ಹಾಗೂ ಬನವಾಸಿ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ರಾಜೀವ ಉಜ್ಜಪ್ಪ ಗೊಲ್ಲರ (೨೨), ಗಣೇಶ ಕುಮಾರ ಕೃಷ್ಣಪ್ಪ ಗೊಲ್ಲರ (೨೧) ಹಾಗೂ ಅಜ್ಜಪ್ಪ @ಅರ್ಜುನ ಮಂಜಪ್ಪ ಗೊಲ್ಲರ( ೨೮) ಬಂಧಿತ ಆರೋಪಿಗಳಾಗಿದ್ದಾರೆ.

ಸ್ಕೂಟಿಗೆ ಡಿಕ್ಕಿಹೊಡೆದ ಖಾಸಗಿ ಬಸ್: ಹೊಸವರ್ಷಕ್ಕೆ ಬಟ್ಟೆ ತರಲು ತೆರಳುತ್ತಿದ್ದ ಬಾಲಕಿ ಸ್ಥಳದಲ್ಲೇ ಸಾವು: ತಂದೆಗೆ ಗಂಭೀರ ಗಾಯ

ಆರೋಪಿಗಳು ಡಿ.೨೮ರಂದು ಬನವಾಸಿ ರಸ್ತೆಯಲ್ಲಿ,ಹೆಗಡೆಕಟ್ಟಾ ಕ್ರಾಸ್ ಸೇರಿ ಹಲವೆಡೆ ಬೈಕ್ ಸವಾರರನ್ನು ಅಡ್ಡಗಟ್ಟಿ ಚಾಕು ತೋರಿಸಿ ಹೆದರಿಸಿ ಹಣ ಹಾಗೂ ಮೊಬೈಲ್ ಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಬನವಾಸಿ ಪೊಲೀಸ್ ಠಾಣೆ ಹಾಗೂ ಶಿರಸಿ ಗ್ರಾಮೀಣ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಶಿರಸಿ ವೃತ್ತ ಪೋಲಿಸರು ಆರೋಪಿಗಳ ಬಂಧನಕ್ಕಾಗಿ ವಿಶೇಷ ಐದು ತಂಡವನ್ನು ರಚಿಸಿ ತನಿಖೆ ಪ್ರಾರಂಭಿಸಿದ್ದರು. ದರೋಡೆಗೆ ಒಳಗಾದವರ ಬಳಿ ಆರೋಪಿಗಳ ಚಿತ್ರಣ ಹಾಗೂ ಬಳಸಿದ ವಾಹನಗಳ ಬಗ್ಗೆ ಮಾಹಿತಿ ಪಡೆದುಕೊಂಡ ಖಾಕಿ ಪಡೆ ಆರೋಪಿಗಳ ಬಂಧನಕ್ಕಾಗಿ ತೀವ್ರ ಹುಡುಕಾಟ ಪ್ರಾರಂಭಿಸಿತ್ತು. ಡಿ.೩೦ರಂದು ಮತ್ತೆ ದರೋಡೆಗೆ ಇಳಿದಿದ್ದ ಖಧಿಮರನ್ನು ಚೇಸ್ ಮಾಡಿ ಮಳಗಿ ಬಳಿ ಆರೋಪಿಗಳನ್ನು ಹೆಡೆಮುರಿ ಕಟ್ಟಿ ತಮ್ಮ ವಶಕ್ಕೆ ಪಡೆಯುವಲ್ಲಿ ಪೋಲಿಸ್ ಇಲಾಖೆ ಯಶಸ್ವಿಯಾಗಿದೆ.

ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್ ಹಾಗೂ ಮೊಬೈಲ್ ಗಳನ್ನು ಕಂತಿನ ಸಾಲದ ಮೇಲೆ ಖರಿದಿ ಮಾಡಿದ್ದ ಆರೋಪಿಗಳು ಸಾಲ ತೀರಿಸಲು ಏನಾದರೂ ಉಪಾಯ ಮಾಡಬೇಕು ಎಂದು ಯೋಚಿಸುತ್ತಿದ್ದರಂತೆ ಆಗ ಅವರ ತಲೆಗೆ ಬಂದಿದ್ದೆ ದರೋಡೆ ಮಾಡುವ ಐಡಿಯಾ. ರಸ್ತೆಗಳ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡು ದರೋಡೆಮಾಡಿ ಬಂದ ಹಣದಲ್ಲಿ ಮೋಜು ಮಸ್ತಿ ಮಾಡುವ ಉದ್ದೇಶ ಇವರದ್ದಾಗಿತ್ತು ಎನ್ನಲಾಗಿದೆ. ಆದರೆ ಖಾಕಿ ಪಡೆ ಅವರನ್ನು ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಿಂದ ರಾತ್ರಿವೇಳೆ ಸಂಚರಿಸುವ ಬೈಕ್ ಸವಾರರಿಗೆ ಭಯದ ವಾತಾವರಣ ಸೃಷ್ಟಿಯಾಗಿತ್ತು. ಹಿಂದುಗಡೆಯಿoದ ಮತ್ತೊಂದು ಬೈಕ್ ಬಂದರೂ ಸಹ ಭಯಬೀಳುವಷ್ಟರಮಟ್ಟಿಗೆ ಈ ಖಧಿಮರು ತಮ್ಮ ಕೈಚಳಕ ತೋರಿದ್ದರು.ಪೋಲಿಸ್ ಇಲಾಖೆ ಆರೋಪಿಗಳನ್ನು ಬಂಧಿಸಿ ಜನರಲ್ಲಿದ್ದ ಭಯವನ್ನು ದೂರಮಾಡಿದೆ.

ಬಂಧಿತ ಆರೋಪಿಗಳಿಂದ ೧೩,೫೦೦ರೂ ನಗದು , ಎರಡು ಬೈಕ್ ಹಾಗೂ ಕೃತ್ಯಕ್ಕೆ ಬಳಸಲಾದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆ ಯಲ್ಲಿ ಡಿವೈಎಸ್ಪಿ ಗಣೇಶ ಕೆ ಎಲ್, ಸಿಪಿಐ ರಾಮಚಂದ್ರ ನಾಯಕ್ ಹಾಗೂ ಶಿರಸಿ ಉಪ ವಿಭಾಗದ ಎಲ್ಲಾ ಠಾಣೆಯ ಪಿಎಸ್ಐ ಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಇವರ ಕಾರ್ಯಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹರ್ಷ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version