Follow Us On

WhatsApp Group
Focus NewsImportant
Trending

ಬಸ್ ನಿಲ್ದಾಣದಲ್ಲಿ ಮದಿರೆಯ ಮತ್ತಿನಲ್ಲಿ ಮಲಗಿದ್ದವನ ಜೇಬಿಗೆ ಕೈ ಹಾಕಿ ಹಣ ಎಗರಿಸಿದ ಚಾಲಾಕಿ ವೃದ್ಧೆ

ಯಲ್ಲಾಪುರ: ಕಂಠಪೂರ್ತಿ ಕುಡಿದು ಮದಿರೆಯ ಮತ್ತಿನಲ್ಲಿ ಮಲಗಿದ್ದವನ ಜೇಬಿಗೆ ವೃದ್ಧೆಯಿಬ್ಬಳು ಕೈ ಹಾಕಿ ಹಣ ಎಗರಿಸಿದ ಘಟನೆ ಯಲ್ಲಾಪುರ ಬಸ್ ನಿಲ್ದಾಣದಲ್ಲಿ ನಡೆದಿದೆ. ಈ ಚಾಲಾಕಿ ಅಜ್ಜಿಯ ಕೈ ಚಳಕ ಕಂಡ ಪ್ರಯಾಣಿಕರೊಬ್ಬರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಕ್ಷಣಮಾತ್ರದಲ್ಲಿ ಹಣ ಎಗರಿಸಿದ ಅಜ್ಜಿಯ ಕೈಚಳಕ ಕಂಡವರು ದಂಗಾಗಿ ಹೋಗಿದ್ದಾರೆ. ಹೌದು, ಯಲ್ಲಾಪುರ ಸರ್ಕಾರಿ ಬಸ್‌ ಸ್ಟಾಂಡಿನ ನಂದಿನಿ ಹಾಲಿನ ಕೌಂಟರ್ ಬಳಿ ನಶೆಯಲ್ಲಿ ಯುವಕನೊಬ್ಬ ಮಲಗಿದ್ದ. ಅಲ್ಲಿಗೆ ಬಂದ ಅಜ್ಜಿ, ಆತನ ಜೇಬಿಗೆ ಕೈ ಹಾಕಿ ಹಣಕ್ಕಾಗಿ ಹುಡುಕಾಟ ನಡೆಸಿದ್ದು, ಹಣ ಸಿಕ್ಕಿದ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾರೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Back to top button