Follow Us On

WhatsApp Group
Focus News

ದಿನಕರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಧಾರೇಶ್ವರದಲ್ಲಿ ಮಾತಾ ಪಿತೃ ವಂದನಾ ಕಾರ್ಯಕ್ರಮ

ಕುಮಟಾ: ದಿನಕರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಧಾರೇಶ್ವರದಲ್ಲಿ ಮಾತಾ ಪಿತೃ ವಂದನಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಗುರುಪ್ರಸಾದ ಪ್ರೌಢಶಾಲೆ, ಮಲ್ಲಾಪುರದ ನಿವೃತ್ತ ಮುಖ್ಯೋಪಾಧ್ಯಾಯನಿ ಸರೋಜಿನಿ ಹೆಬ್ಬಾರ್ ರವರು ಉಪನ್ಯಾಸ ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ನಮ್ಮ ದೇಶದ ಸಂಸ್ಕೃತಿ ಆಚಾರ ವಿಚಾರಗಳನ್ನು ಇವತ್ತಿನ ಯುವಜನತೆ ಮರೆಯಬಾರದು ಹಾಗೂ ಮಕ್ಕಳಿಗೆ ತಂದೆ ತಾಯಂದಿರ ಮಹತ್ವವನ್ನು ತಮ್ಮ ವಿಶೇಷ ವಾಕ್ ಚಾತುರ್ಯದ ಮೂಲಕ ಮಕ್ಕಳಿಗೆ ಪಾಲಕರಿಗೆ ತಿಳಿಹೇಳಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಆನಂದು ಶಾನಭಾಗ್, ಕೋಶಾಧ್ಯಕ್ಷರಾದ ನಾಗರಾಜ ಶೇಟ್, ಮಾತೃ ಮಂಡಳಿ ಅಧ್ಯಕ್ಷರಾದ ಶಿಲ್ಪಾ ಭಟ್,ಹಾಗೂ ದಿನಕರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರುಗಳು ಉಪಸ್ಥಿತರಿದ್ದರು. ಆಗಮಿಸಿದ ಪಾಲಕ ವೃಂದಕ್ಕೆ ವಿದ್ಯಾರ್ಥಿಗಳಿಂದ ವಂದನಾ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

ವಿಸ್ಮಯ ನ್ಯೂಸ್, ಕುಮಟಾ

Back to top button