Follow Us On

WhatsApp Group
Focus NewsImportant
Trending

ಬೆಳಗಿನ ಜಾವ ಮನೆಯ ಬಾಗಿಲಿಗೆ ಬಂದ ಚಿರತೆ: ಕಂಗಾಲಾಗಿ ಕೂಗಿದ ಮನೆಯ ಮಾಲೀಕ

ಕಾರವಾರ: ಮನೆಯೊಂದಕ್ಕೆ ಚಿರತೆಯೊಂದು ಬಂದು ಮಲಗಿದ್ದ ಬೆಕ್ಕನ್ನು ಕಬಳಿಸಲು ಯತ್ನಿಸಿದ ಘಟನೆ ಹಬ್ಬುವಾಡದಲ್ಲಿ ನಡೆದಿದೆ. ಹೌದು, ನಸುಕಿನಲ್ಲಿಯೇ ಹಬ್ಬುವಾಡಾದ ಕೆ.ಎಚ್.ಬಿ ಕಾಲನಿಯ ಮನೆಗೆ ಚಿರತೆಯೊಂದು ನಾಯಿ ಬೇಟೆಗೆಂದು ಬಂದಿದ್ದು, ಬೆಕ್ಕನ್ನು ಕಬಳಿಸುವ ಯತ್ನದಲ್ಲಿರುವಾಗ ಮನೆಯ ಮಾಲೀಕ ನೋಡಿದ್ದು, ಜೋರಾಗಿ ಕೂಗಿಕೊಂಡ ಪರಿಣಾಮ ಅಲ್ಲಿಂದ ಚಿರತೆ ಓಡಿದೆ ಎನ್ನಲಾಗಿದೆ.

ಈ ಘಟನೆಯಿಂದ ಸುತ್ತಮುತ್ತಲಿನ ಜನರು ಆತಂಕಗೊoಡಿದ್ದು, ಅರಣ್ಯಾಧಿಕಾರಿಗಳು ಈ ವಿಷಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಹಿಂದೆ ಕೂಡಾ ಇಂತಹದೇ ಘಟನೆ ನಡೆದಿದ್ದು, ಚಿರತೆ ಮೂರ್ನಾಲ್ಕು ನಾಯಿಯನ್ನು ಕಬಳಿಸಿದೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button