Important
Trending

ಭಾರತೀಯ ಜನತಾ ಪಕ್ಷವನ್ನ ಕಟ್ಟಿದ್ದು ಸಮರ್ಥ ಭಾರತ,ಸಮೃದ್ಧ ಭಾರತವನ್ನು ಕಟ್ಟೋಕೆ – ಪೂಜಾರಿ

ಭಾರತೀಯ ಜನತಾ ಪಕ್ಷವನ್ನ ಕಟ್ಟಿದ್ದು ಸಮರ್ಥ ಭಾರತ,ಸಮೃದ್ಧ ಭಾರತವನ್ನು ಕಟ್ಟೋಕೆ. ಇವತ್ತು ಇಡಿ ಜಗತ್ತು ಮೆಚ್ಚುವಂತ ನಾಯಕರಾಗಿ ನಮ್ಮ ನರೇಂದ್ರ ಮೋದಿ ಬೆಳೆದಿದ್ದಾರೆ. ದೇಶ ಕಾಯುವ ಸೈನಿಕರಿಗೆ ಕಲ್ಲು ಹೊಡೆಯುವ ಉಗ್ರಗಾಮಿಗಳ ಹೆಡೆಮುರಿ ಕಟ್ಟಿದ್ದು ನಮ್ಮ ಹೆಮ್ಮೆಯ ಪ್ರಧಾನಿಗಳು .ಭಾರತದ ಗೌರವ,ಭಾರತದ ಶಕ್ತಿ ಎನಾದರೂ ಇಂದು ಗೊತ್ತಾಗಲು ಕಾರಣ ನಮ್ಮ ನರೇಂದ್ರ ಮೋದಿಯಂತ ದೇಶಭಕ್ತ ನಾಯಕರು ಕಾರಣ. ಈ ಕಾರಣದಿಂದ ತಾವೆಲ್ಲ ಯಾರು ನಮ್ಮ ನಾಯಕರಾಗಬೇಕು ಎಂದು ತಿಳಿದು ಬೆಂಬಲಿಸಿ ಎಂದು ಶಾಸಕ,ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾರ ಪೂಜಾರಿ ಹೇಳಿದರು. ಅವರು ಜೋಯ್ಡಾದಲ್ಲಿ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾಜಿ ಶಾಸಕ ಸುನಿಲ ಹೆಗಡೆ ಮಾತನಾಡಿ ಜಗಲಪೇಟ ಗ್ರಾ.ಪಂ ಅಧ್ಯಕ್ಷರಾದ ಗಿರೀಶ ನಾಯ್ಕ ಇವತ್ತು ಬಿಜೆಪಿಗೆ ಸೇರಿ ನಮ್ಮ ಸಂಘಟನೆಗೆ ಇನ್ನಷ್ಟು ಬಲ ಪಡಿಸಿದ್ದಾರೆ .ಕಾಂಗ್ರೇಸ ಸರಕಾರದಲ್ಲಿ ಕರೆಂಟ್ ಇಲ್ಲ.. ಇವರು ಜನರಿಗೆ ಉಚಿತವಾಗಿ ಹೇಗೆ ಕರೆಂಟ್ ಕೊಡ್ತಾರೆ? ಗ್ಯಾರಂಟಿ ಇಲ್ಲದ ಪಕ್ಷ ಇಂದು ಗ್ಯಾರಂಟಿ ಕಾರ್ಡ ಹಿಡಿದು ಜನರನ್ನ ಮರಳು ಮಾಡುವ ಕೆಲಸ ಮಾಡುತ್ತಿದೆ ಎಂದರು.
ಬಿಜೆಪಿ ತಾಲೂಕಾಧ್ಯಕ್ಷ ಸಮತೋಷ ರೇಡ್ಕರ ಮಾತನಾಡಿ ರಾಮನಗರಕ್ಕೆ ನೀರು ಕೊಡಲು 28 ಕೋಟಿ ಯೋಜನೆ ತಾನು ಮಾಡಿದ್ದು ಹೇಳಲು ದೇಶಪಾಂಡೆಯವರಿಗೆ ನಾಚಿಕೆಯಾಗಬೇಕು. ಬಿಜೆಪಿ ಸರಕಾರ ತಂದ ಯೋಜನೆಯನ್ನು ತಾನು ಉದ್ಘಾಟನೆ ಮಾಡುವುದμÉ್ಟ ಇವರು ಮಾಡಿದ ಕೆಲಸ ಎಂದರು.

ಇದೇ ವೇಳೆ ಜಗಲಪೇಟ ಗ್ರಾ.ಪಂ ಅಧ್ಯಕ್ಷ ಗಿರೀಶ ನಾಯ್ಕ ಹಾಗೂ 4 ಜನ ಗ್ರಾ.ಪಂ ಸದಸ್ಯರು ಮತ್ತು 200 ಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು,

ವಿಸ್ಮಯ ನ್ಯೂಸ್, ಜೋಯ್ಡಾ

Back to top button