Focus NewsImportant
Trending

ಹೆಂಡತಿ ಮನೆಗೆ ಹೋಗಿಬರುವುದಾಗಿ ಹೇಳಿ ಹೋದ ವ್ಯಕ್ತಿ ಕಾಣೆ

ಸಿದ್ದಾಪುರ: ಹೆಂಡತಿ ಮನೆಗೆ ಹೋಗಿಬರುವುದಾಗಿ ಹೇಳಿ ಹೋದ ವ್ಯಕ್ತಿ ಕಾಣೆಯಾಗಿದ್ದು ಹುಡುಕಿಕೊಡುವಂತೆ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಜುನಾಥ್ ತಿಮ್ಮ ಚೆನ್ನಯ್ಯ (45) ಹೊನ್ನೇಹದ್ದ ಹಾರ್ಸಿಕಟ್ಟಾ ಕಾಣೆಯಾದ ವ್ಯಕ್ತಿ. 13 ವರ್ಷದ ಹಿಂದೆ ಹೇರೂರನ ಚೇತನಾಳೊಂದಿಗೆ ವಿವಾಹವಾಗಿದ್ದು ಮನೆ ಅಳಿಯ ತನಕ್ಕೆ ಹೋಗಿದ್ದ.

ಕಳೆದ 4 ವರ್ಷದ ಹಿಂದೆ ಸಂಸಾರದಲ್ಲಿ ಸರಿ ಬಾರದೇ ತನ್ನ ಊರಿಗೆ ಬಂದು ಮನೆಯಲ್ಲಿಯೇ ಇದ್ದುಕೊಂಡು ಅಲ್ಲಿ-ಇಲ್ಲಿ ಕೆಲಸ ಮಾಡಿಕೊಂಡು ವಿಪರೀತ ಕುಡಿತದ ಚಟಕ್ಕೆ ಅಂಟಿಸಿಕೊoಡಿದ್ದ ಎನ್ನಲಾಗಿದೆ. ಏಪ್ರಿಲ್ 25 ರಂದು ಹೆಂಡತಿ ಮನೆಗೆ ಹೋಗಿ ಬರುತ್ತೇನೆ ಎಂದು ಹೋದವನು ಕಾಣೆಯಾಗಿದ್ದು ಹುಡುಕಿಕೊಡುವಂತೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Back to top button