ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಕಾಲು ಜಾರಿ ಹೊಳೆಗೆ ಬಿದ್ದು ಇಬ್ಬರ ಸಾವು: ಕಾಪಾಡಲು ಹೋದವನು ದುರ್ಮರಣ

ಸಿದ್ದಾಪುರ : ಕೃಷಿ ಕೆಲಸ ಮಾಡುತಿದ್ದ ರೈತನೋರ್ವ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಆತನನ್ನು ಕಾಪಾಡಲು ಹೋದವನ ಸೇರಿ ಇಬ್ಬರು ನೀರಿನಲ್ಲಿ ಮುಳುಗಿ ಮೃತ ಪಟ್ಟ ಘಟನೆ ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಇರಾಸೆ ಹೊಳೆಯಲ್ಲಿ ನಡೆದಿದೆ. ದೇವಾನಂದ ಧರ್ಮ ಮಡಿವಾಳ (35) ಕಂಚಿಮನೆ, ಮಾಬ್ಲೇಶ್ವರ್ ಮಂಜಾ ಮಡಿವಾಳ (48) ಕಂಚಿಮನೆ,
ಮೃತ ದುರ್ದೈವಿಗಳು.

ಇರಾಸೆ ಊರಿನ ಜಮೀನಿನ ಕೆಲಸಕ್ಕೆ ಹೋದ ದೇವಾನಂದ ಧರ್ಮ ಮಡಿವಾಳ ರವರು ಜಮೀನಿನ ಕಂಟದಲ್ಲಿ ಬೆಳೆದಿದ್ದ ಗಿಡ ಗಂಟಿಗಳನ್ನು ಸವರುತ್ತಿದ್ದಾಗ ಕಾಲು ಜಾರಿ ಜಮೀನಿನ ಪಕ್ಕದ ಹೊಳೆಯ ಹೊಂಡದ ನೀರಿನಲ್ಲಿ ಬಿದ್ದುಮುಳುಗುತ್ತಿರುವಾಗ ಅವನನ್ನು ಕಾಪಾಡಲು ಹೋದ ಮಾಬ್ಲೆಶ್ವರ ಮಂಜಾ ಮಡಿವಾಳ ಕೂಡಾ ಮೃತ ಪಟ್ಟಿದ್ದು ಘಟನೆಗೆ ಸಂಬಂಧಿಸಿದಂತೆ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ವಿಸ್ಮಯ ನ್ಯೂಸ್ ದಿವಾಕರ ಸಂಪಖಂಡ‌‌‌ ಸಿದ್ದಾಪುರ

Exit mobile version