Big News
Trending

ಯಶಸ್ವಿಯಾಗಿ ಜರುಗಿದ ಆನ್ ಲೈನ್ ರಾಷ್ಟ್ರೀಯ ವಿಚಾರ ಸಂಕಿರಣ

ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ
400 ಕ್ಕೂ ಅಧಿಕ‌ ಆಸಕ್ತರು ಭಾಗಿ

ಉತ್ತರಕನ್ನಡ ಜಿಲ್ಲೆಯ ಪ್ರತಿಷ್ಟಿತ ಡಾ|| ಏ.ವಿ.ಬಾಳಿಗಾ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗವು ಅಗಸ್ಟ್ 1ಮತ್ತು 2ರಂದು ಎರಡು ದಿನಗಳ ಆನ್ ಲೈನ್ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿತ್ತು. ನ್ಯಾನೋ ವಸ್ತುಗಳು ಮತ್ತು ಭೌತಶಾಸ್ತ್ರ, ವಸ್ತುವಿಜ್ನಾನ ಸಂಶೋಧನೆಗಳಲ್ಲಿ ಗುಣಧರ್ಮ ಕಂಡು ಹಿಡಿಯುವ ತಂತ್ರಗಳು* ಈ ವಿಷಯದ ಮೇಲೆ ಹಮ್ಮಿಕೊಂಡ  ವಿಚಾರ ಸಂಕಿರಣಕ್ಕೆ  400ಕ್ಕೂ ಹೆಚ್ಚು ಆಸಕ್ತರು ಭಾಗವಹಿಸಿದ್ದರು.


ಕಾಲೇಜಿನ ಪ್ರಭಾರೆ ಪ್ರಾಂಶುಪಾಲರಾದ ಪ್ರೊ. ಎಮ್. ಜಿ. ಹೆಗಡೆ  ಕಾರ್ಯಕ್ರಮ ವನ್ನು ಉದ್ಘಾಟಿಸಿದರು.ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ರಾದ  ಡಾ|| ಎನ್ .ಡಿ. ನಾಯಕ ಸ್ವಾಗತಿಸಿದರು.ಪ್ರೊ|| ವಿನಾಯಕ ಭಟ್ ಅತಿಥಿಗಳನ್ನು  ಪರಿಚಯಿಸಿದರು. ಪ್ರಥಮ ದಿನದ ಕಾರ್ಯಕ್ರಮದಲ್ಲಿ ಡಾ|| ಎನ್. ಹೆಚ್.ಆಯಾಚಿತ್ ಕುಲಸಚಿವರು , ಕೇ. ಎಲ್. ಇ.ತಾಂತ್ರಿಕ ವಿಶ್ವವಿದ್ಯಾಲಯ ಹುಬ್ಬಳ್ಳಿ ಇವರು ದಿಕ್ಸೂಚಿ ಭಾಷಣಗೈದರು.ಸಂಪನ್ಮೂಲ ವ್ಯಕ್ತಿಯಾಗಿ *ನ್ಯಾನೋ ವಸ್ತುಗಳು* ಕುರಿತು ಉಪನ್ಯಾಸ ನೀಡಿದರು.ದ್ವಿತೀಯ ಸಂಪನ್ಮೂಲ ವ್ಯಕ್ತಿ ಯಾದ ಡಾ ||ಬಿ.ಜಿ. ಹೆಗಡೆ  ಪ್ರಾಧ್ಯಾಪಕರು ಮತ್ತು ಚೇರಮೆನ್ ಭೌತಶಾಸ್ತ್ರ ವಿಭಾಗ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ  ಬೆಳಗಾವಿ,ಇವರು *ನ್ಯಾನೋ ಸಿಂತೆಸಿಸ್* ವಿಷಯದ ಕುರಿತು ಉಪನ್ಯಾಸಗೈದರು . ಎರಡನೇ ದಿನದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಡಾ|| ಶ್ರೀಧರ್ ಪಿ. ಎಮ್.  ಸಹಪ್ರಾಧ್ಯಾಪಕರು  ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯ ತುಮಕೂರು ಇವರು *ನ್ಯಾನೋ ತಂತ್ರಜ್ಞಾನದಲ್ಲಿ ನೂತನ ಬೆಳವಣಿಗೆಗಳು* ಕುರಿತು ಉಪನ್ಯಾಸ ನೀಡಿದರು ‌.
ಕಾರ್ಯಕ್ರಮದಲ್ಲಿ 20 ಶಿಬಿರಾರ್ಥಿಗಳು ಸಂಶೋಧನಾ ಲೇಖನಗಳನ್ನು ಪ್ರಸ್ತುತ ಪಡಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ|| ಎಸ್. ಎನ್. ಶೆಟ್ಟಿ ಸಮಾರೋಪ ಭಾಷಣಗೈದರು.. ಕುಮಾರ ವಿವೇಕ ಹೆಗಡೆ , ಕುಮಾರ ಕಾರ್ತಿಕ ಶೆಟ್ಟಿ ತಾಂತ್ರಿಕ ಸಹಾಯ ಮಾಡಿದರು. ಡಾ|| ಚೇತನ ಪೈ ವಂದಿಸಿದರು.

ಕೆನರಾ ಕಾಲೇಜು ಸೊಸೈಟಿ ಯ ಅಧ್ಯಕ್ಷ ರು ಶ್ರೀ ರಘು ಪಿಕಳೆ, ಚೇರ್ ಮನ್ ಶ್ರೀ ಎಮ್ . ವಾಯ್ ಪ್ರಭು , ಕಾರ್ಯದರ್ಶಿಗಳು  ಶ್ರೀ ವಿನೋದ ಪ್ರಭು  ಮತ್ತು ಸಮಸ್ತ ಆಡಳಿತ ಮಂಡಳಿಯವರು , ಪ್ರಾಧ್ಯಾಪಕವ್ರಂದ, ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮ ಆಯೋಜನೆಗೆ ಸಂಪೂರ್ಣ ಸಹಕಾರ ನೀಡಿ ಅಭಿನಂದಿಸಿದರು‌.

ವಿಸ್ಮಯ ನ್ಯೂಸ್ ಕುಮಟಾ

ಪಂಡಿತ್ ಶಂಕರ್ ಗುರೂಜಿಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button