![](http://i0.wp.com/vismaya24x7.com/wp-content/uploads/2023/06/yallapur-news.jpg?fit=1280%2C720&ssl=1)
ಯಲ್ಲಾಪುರ: ಮನೆಯಲ್ಲಿ ವಿದ್ಯುತ್ ಹೋದ ವೇಳೆ ಚಿಮಣಿ ದೀಪ ಹಚ್ಚಲು ಹೋದ ಬಾಲಕನ ದೇಹಕ್ಕೆ ಬೆಂಕಿ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಬಳಗಾರ ಗ್ರಾಮದ ಹಂಸಗದ್ದೆಯಲ್ಲಿ ನಡೆದಿದೆ. 4 ವರ್ಷದ ಯತೀನ ರವಿ ಗೌಡ ಎಂಬಾತನೇ ಮೃತ ಬಾಲಕ ಎಂದು ತಿಳಿದುಬಂದಿದೆ. ಸಂಜೆ 7 ಗಂಟೆಯ ಸುಮಾರಿಗೆ ತನ್ನ ಮನೆಯ ಕರೆಂಟ್ ಹೋದಾಗ ಚಿಮಣಿ ದೀಪ ಹಚ್ಚಲೆಂದು ಹೋದವನಿಗೆ ಆಕಸ್ಮಿಕವಾಗಿ ದೇಹಕ್ಕೆ ಬೆಂಕಿ ತಗುಲಿ ಸಂಪೂರ್ಣ ದೇಹ ಸುಟ್ಟಿದೆ. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ವಿಸ್ಮಯ ನ್ಯೂಸ್, ಯಲ್ಲಾಪುರ