Follow Us On

Google News
Important
Trending

ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿಬಿದ್ದ ಕಾರು

ಸಿದ್ದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ತಾಲೂಕಿನ ಗಡಿ ಭಾಗದ  ಬೆಂಗಳೂರು ಹೊನ್ನಾವರ ಹೆದ್ದಾರಿಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದವರು ಎನ್ನಲಾದ  ಪ್ರವಾಸಿಗರು ಜೋಗ ಜಲಪಾತವನ್ನು ವೀಕ್ಷಿಸಿ ಹೊನ್ನಾವರ ಕಡೆ ಹೋಗುತ್ತಿರುವಾಗ ತಾಲೂಕಿನ ಗಡಿ ಭಾಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು  ಚರಂಡಿಗೆ ಬಿದ್ದಿದೆ. ನಾಲ್ವರು ವಾಹನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಘಟನೆಯಲ್ಲಿ  ಎಲ್ಲರೂ ಪ್ರಾಣಪಯದಿಂದ ಹಾರಾಗಿದ್ದಾರೆ.

ಅತಿಯಾಗಿ ಸುರಿಯುತ್ತಿರುವ ಮಳೆ ಯಿಂದಾಗಿ ಪ್ರಯಾಣಿಕರಿಗೆ ಮಾರ್ಗ ಸರಿಯಾಗಿ ಕಾಣದೆ ಈ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ.

ವಿಸ್ಮಯ ನ್ಯೂಸ್, ಸಿದ್ದಾಪುರ

Back to top button