![](http://i0.wp.com/vismaya24x7.com/wp-content/uploads/2023/07/acident-death.jpg?fit=1280%2C720&ssl=1)
ಶಿರಸಿ: ಶಿರಸಿ ಮೂಲದ ಇಬ್ಬರು ರಸ್ತೆ ಅಪಘಾತದಲ್ಲಿ ರಾಣಿಬೆನ್ನೂರಿನಲ್ಲಿ ಮೃತಪಟ್ಟ ಘಟನೆ ನಡೆದಿದೆ. ಬೆಂಗಳೂರಿನಿAದ ಕಾರಿನಲ್ಲಿ ಬರುತ್ತಿರುವಾದ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹುಣಸೆಮರಕ್ಕೆ ಡಿಕ್ಕಿ ಹೊಡೆದಿದು ದುರ್ಘಟನೆ ಸಂಭವಿಸಿದೆ.. ತಾಲೂಕಿನ ಹುಲೇಕಲ್ ಗ್ರಾಮದ ಮೂಲದವರಾದ ವಿಠ್ಠಲ್ ಹಾಗೂ ಜಯಂತಿ ದಿನೇಶ ಶೇಟ್ ಮೃತ ದುರ್ದೈವಿಗಳು. ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದು ರಾಣಿಬೆನ್ನೂರು ಹಲಗೇರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರೀರ್ವರು ಶಿರಸಿಯ ಮಾರಿಗುಡಿ ಹಿಂಬಾಗದ ಸಾಯಿಮಂದಿರ ಬಳಿಯ ಹಾಲಿ ನಿವಾಸಿಗಳು ಎಂದು ತಿಳಿದುಬಂದಿದೆ.
ವಿಸ್ಮಯ ನ್ಯೂಸ್, ಶಿರಸಿ
![](http://i0.wp.com/vismaya24x7.com/wp-content/uploads/2023/07/taranaga-2.jpg?resize=708%2C398&ssl=1)