ದನದ ಕೊಟ್ಟಿಗೆಗೆ ಬೆಂಕಿ: ಏಳು ಜಾನುವಾರುಗಳು ಸಜೀವ ದಹನ

ಮುಂಡಗೋಡು: ವಿದ್ಯುತ್ ಶಾರ್ಟ್ ಸೆರ್ಕ್ಯೂಟ್ ನಿಂದ ದನದ ಕೊಟ್ಟಿಗೆಗೆ ಬೆಂಕಿ ತಗಲಿ ಏಳು ಜಾನುವಾರಗಳ ಸಜೀವವಾಗಿ ದಹನಗೊಂಡ ಘಟನೆ ತಾಲೂಕಿನ ಹಳೂರಿನಲ್ಲಿ ನಡೆದಿದೆ. ತಡರಾತ್ರಿ ಆಕಸ್ಮಿಕವಾಗಿ ಆದ ವಿದ್ಯುತ್ ಶಾರ್ಟ್ ಸೆರ್ಕ್ಯೂಟ್ ನಿಂದ ಕೊಟ್ಟಿಗೆಗೆ ಬೆಂಕಿ ತಗುಲಿ ನಾಲ್ಕು ಆಕಳು, ಮೂರು ಕರುಗಳು ಸಜೀವ ದಹನಗೊಂಡಿದೆ. ಅದೃಷ್ಟವಶಾತ್ ಮನೆಯಿಂದ ಕೊಟ್ಟಿಗೆ ದೂರ ಇರುವುದರಿಂದಾಗಿ ಮನೆಯವರು ಬೆಂಕಿ ಅನಾಹುತದಿಂದ ಪಾರಾಗಿದ್ದಾರೆ.ಮಂಜುನಾಥ ಶೇಟ್ ಎಂಬುವವರಿಗೆ ಸೇರಿದ ಜಾನುವಾರಗಳು ಇದಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Exit mobile version