![](http://i0.wp.com/vismaya24x7.com/wp-content/uploads/2021/09/hacker-3.jpg?fit=640%2C492&ssl=1)
ಶಿರಸಿ: ನ್ಯಾಯಾಧೀಶರೋರ್ವರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಕಳ್ಳರು ಖಾತೆಯಲ್ಲಿದ್ದ ಸುಮಾರು 1.23 ಲಕ್ಷ ರೂ ವಂಚಿಸಿದ ಘಟನೆ ಶಿರಸಿಯಲ್ಲಿ ನಡೆದಿದೆ. ಶಿರಸಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರೊಬ್ಬರ ಮೊಬೈಲ್ ನಂಬರ್ಗೆ ಲಿಂಕ್ ಒಂದನ್ನು ಕಳುಹಿಸಿ, ಅದನ್ನು ಭರಣ ಮಾಡುವಂತೆ ಸೂಚಿಸಿದ್ದಾರೆ. ಬಳಿಕ ಪಾನ್ಕಾರ್ಡ್ ಮತ್ತು ಓಟಿಪಿ ಯನ್ನು ಲಿಂಕ್ನಲ್ಲಿ ಭರ್ತಿಮಾಡುವಂತೆ ಹೇಳಿದ್ದಾರೆ. ನ್ಯಾಯಾಧೀಶರು ಓಟಿಪಿ ಹಾಕುತ್ತಿದ್ದಂತೆ ಖಾತೆಯಲ್ಲಿ ಸುಮಾರು 1.23 ಲಕ್ಷ ಹಣ ವರ್ಗಾವಣೆಯಾಗಿದೆ. ಈ ಕುರಿತು ಶಿರಸಿಯ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್, ಶಿರಸಿ