Accident: ಗೂಡ್ಸ್ ವಾಹನ ಮತ್ತು ಬೈಕ್ ನಡುವೆ ಅಪಘಾತ: ಮೂವರಿಗೆ ಗಾಯ

ಸಿದ್ದಾಪುರ: ಗೂಡ್ಸ್ ವಾಹನ ಮತ್ತು ಬೈಕ್ ನಡುವೆ ಅಪಘಾತ ( Accident) ಸಂಭವಿಸಿ ಮೂವರು ಸವಾರರಿಗೆ ಗಾಯಗಳಾದ ಘಟನೆ ತಾಲೂಕಿನ ತ್ಯಾಗಲಿ ಸಮೀಪ ನಡೆದಿದೆ. ತ್ಯಾಗಲಿ ಸರ್ಕಾರಿ ಪ್ರಾಥಮಿಕ ಶಾಲಾ ಮುಂದಿನ ರಸ್ತೆಯಲ್ಲಿ ಘಟನೆ ನಡೆದಿದೆ. ಸವಾರರಾದ ಉಮೇಶ್ ಬಂಡಿ ಮಾದರ ( 20 ) ಬಂಕಾಪುರ್, ನಾಗರಾಜ್ ಬಂದೀಯಾ ಮಾದರ ( 25) ಬಂಕಾಪುರ, ಸಲ್ಮಾನ್ ಶಿರಸಿ ಎನ್ನುವವರಿಗೆ ಗಾಯಗಳಾಗಿವೆ. ಉಮೇಶ್, ನಾಗರಾಜ್ ಎನ್ನುವವರಿಗೆ ಚಿಕಿತ್ಸೆಗೆ ಶಿರಸಿ ಪಂಡಿತ್ ಹಾಸ್ಪಿಟಲ್ ನಲ್ಲಿ ದಾಖಲಿಸಿದ್ದು, ಸಲ್ಮಾನ್ ಎನ್ನುವವರಿಗೆ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಕಳುಹಿಸಲಾಗಿದೆ.

ವಿಸ್ಮಯ ನ್ಯೂಸ್, ಸಿದ್ದಾಪುರ

Exit mobile version