Important
Trending

ಲಾರಿ ನದಿಗೆ ಉರುಳಿ ಬೀಳುವುದನ್ನು ತಡೆದ ಸೇತುವೆ ತಡೆಗೋಡೆ: ಅಪಾಯದಿಂದ ಚಾಲಕ ಪಾರು

ಭಟ್ಕಳ: ಚಾಲಕನ ನಿಯಂತ್ರಣ ತಪ್ಪಿ ಸೇತುವೆ ತಡೆಗೋಡೆಗೆ ಲಾರಿಯೊಂದು ಡಿಕ್ಕಿ ಹೊಡೆದ ಘಟನೆ ವೆಂಕಟಾಪುರದಲ್ಲಿ ಬ್ರಿಡ್ಜ್ ಬಳಿ ನಡೆದಿದೆ. ಮಂಗಳೂರಿನಿoದ ಬಳ್ಳಾರಿ ಹೊಸಪೇಟೆ ಕಡೆಗೆ ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ವೆಂಕಟಾಪುರ ನದಿಗೆ ಹಾಕಿರುವ ತಡೆಗೋಡೆ ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಮದ್ಯಭಾಗ ಸೇತುವೆಗೆ ಸಿಲುಕಿ ಹಾಕಿಕೊಂಡಿತ್ತು.

ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾಗಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಪಘಾತದಲ್ಲಿ ಸೇತುವೆ ತಡೆಗೋಡೆ ಲಾರಿಯನ್ನು ನದಿಗೆ ಬೀಳದಂತೆ ರಕ್ಷಣೆ ಮಾಡಿದೆ. ಈ ಸ್ಥಳದಲ್ಲಿ ಈಗಾಗಲೇ ಹಲವು ಬಾರಿ ಅಪಘಾತ ಸಂಭವಿಸಿದ್ದು ಸದ್ಯ ಅಪಘಾತ ಸ್ಥಳವಾಗಿ ಮಾರ್ಪಾಡಾಗಿದೆ. ಭಟ್ಕಳದಿಂದ ವೆಂಕಟಾಪುರ ಸೇತುವೆ ಬಳಿ ಬರುವ ಮುನ್ನ ರಸ್ತೆ ದೊಡ್ಡದಾಗಿದ್ದು ಸೇತುವೆ ಬಳಿ ಬರುಬರುತ್ತಾ ರಸ್ತೆ ಕಿರುದಾಗಿರುವುದು ಕೂಡ ಅಪಘಾತ ಸಂಭವಿಸಲು ಇನ್ನೊಂದು ಕಾರಣವಾಗಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button