Important
Trending

ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರಗಳ್ಳತನ: ಲಿಂಬು ವ್ಯಾಪಾರಿ & ವೆಲ್ಡಿಂಗ್ ಕೆಲಸಗಾರನ ಸೋಗಿನಲ್ಲಿದ್ದ ಇಬ್ಬರು ಆರೋಪಿಗಳ ಬಂಧನ

ಯಲ್ಲಾಪುರ: ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರಗಳ್ಳತನದಲ್ಲಿ ಭಾಗಿಯಾದ ಇಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತ ಆರೋಪಿಗಳಿಂದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಹೊನ್ನಾವರ, ಭಟ್ಕಳ, ಯಲ್ಲಾಪುರ,ಶಿವಮೊಗ್ಗ, ಸಾಗರ,ಆನಂದಪುರಗಳಲ್ಲಿ ಆರೋಪಿಗಳು ಕೈಚಳಕ ತೋರಿಸಿ, ಮಾಂಗಲ್ಯ ಸರಗಳನ್ನು ಸುಲಿಗೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಹಾವೇರಿಯ ಸವಣೂರಿನ ಲಿಂಬು ವ್ಯಾಪಾರಿ ಅಜಪರ್ ಖಾದರಗೌಸ್ ಗವಾರಿ ಮತ್ತು ಶಿರಸಿಯ ರಾಮನಬೈಲ್ ವೆಲ್ಡಿಂಗ್ ಕೆಲಸಗಾರ ಪೈಜಾನ್ ಅಬ್ದುಲ್ ಸಮದ್ ಮುಲ್ಲಾ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಆರೋಪಿತರಿಂದ ಕೃತ್ಯಕ್ಕೆ ಬಳಸಿದ 1.20 ಲಕ್ಷ ರೂಪಾಯಿ ಮೌಲ್ಯದ ಬಜಾಜ್ ಪಲ್ಸರ್ , ಮತ್ತು 55 ಗ್ರಾಮ್ ಚಿನ್ನ ಸೇರಿದಂತೆ ಒಟ್ಟು 4.70 ಲಕ್ಷ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋದ ವ್ಯಕ್ತಿಗೆ ರೈಲು ಬಡಿದು ಸಾವು

hnr death 1

ಹೊನ್ನಾವರ: ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋದ ವ್ಯಕ್ತಿಗೆ ರೈಲು ಬಡಿದು ಮೃತಪಟ್ಟಿರುವ ಘಟನೆ ತಾಲೂಕಿನ ಬಿಕಾಸಿನತಾರಿ ರೈಲ್ವೆ ಟನೇಲ್ ಹತ್ತಿರ ನಡೆದಿದೆ. ಹಡಿನಬಾಳ ಹುಡಗೋಡ ಧರ್ಮ ಶಂಭು ನಾಯ್ಕ(52) ಮೃತ ವ್ಯಕ್ತಿ. ಮೃತ ವ್ಯಕ್ತಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಯಲ್ಲಾಪುರ ಮತ್ತು ಹೊನ್ನಾವರ

Back to top button