Fisherman: ದಡಕ್ಕೆ ಮರಳುತ್ತಿದ್ದ ವೇಳೆ ಪಾತಿ ದೋಣಿ ಮುಳುಗಡೆಯಾಗಿ ಮೀನುಗಾರ ಸಾವು

WhatsApp Group Join Now

ಭಟ್ಕಳ: ಪಾತಿ ದೋಣಿಯಲ್ಲಿ ಮೀನುಗಾರಿಕೆ ತೆರಳಿ, ಮರಳಿ ದಡಕ್ಕೆ ಬರುತ್ತಿದ್ದ ವೇಳೆ ಪಾತಿ ದೋಣಿ ಮುಳುಗಡೆಯಾಗಿ ಮೀನುಗಾರನೊರ್ವ ( Fisherman) ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊನ್ನೆಗದ್ದೆಯಲ್ಲಿ ನಡೆದಿದೆ. ಮೃತ ಮೀನುಗಾರ, ಕುಪ್ಪ ಗೋಯ್ದ ಮೊಗೇರ ಎಂದು ತಿಳಿದು ಬಂದಿದೆ. ಈತ ಮೀನು ಹಿಡಿಯಲು ಬಲೆ ತೆಗೆದುಕೊಂಡು ಪಾತಿ ದೋಣಿಯ ಮೇಲೆ ಹೊನ್ನೆಗದ್ದೆ ಸಮೀಪದ ಸಮುದ್ರದಲ್ಲಿ ಬಲೆ ಹಾಕಿ ಮರಳಿ ದಡಕ್ಕೆ ಬರುವ ವೇಳೆ ಆಕಸ್ಮಿಕವಾಗಿ ದೋಣಿ ಪಲ್ಟಿಯಾಗಿ ಸಮುದ್ರದಲ್ಲಿ ಮುಳುಗಿ (Fisherman) ಮೃತಪಟ್ಟಿದ್ದಾನೆ.

ಈತನ ಮೃತ ದೇಹವನ್ನು ಸ್ಥಳೀಯರು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮೃತನ ಮಗ ಯಶೋಧರ ಮೊಗೇರ ಗ್ರಾಮೀಣ ಠಾಣೆಯ ದೂರು ನೀಡಿದ್ದು, ಎಸ್. ಐ.ರಾಜೇಶ್ ಕೊರಗಾ ಪ್ರಕರಣವನ್ನು ದಾಖಲಿಸಿಕೊಂಡು ಶವವನ್ನು ಮಹಜರು ನಡೆಸಿ ವಾರಿಸುದಾರರಿಗೆ ನೀಡಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version