ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ಅವಾಂತರ: ನೀರಿನಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿ

ಶಿರಸಿ: ವಿದ್ಯಾರ್ಥಿಯೊಬ್ಬ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ಮುಳುಗಿ ಸಾವನ್ನಪ್ಪಿರುವ ಘಟನೆ ಶಿರಸಿ ತಾಲೂಕಿನ ಸೋಂದಾ ಶಾಲ್ಮಲಾ ನದಿಯಲ್ಲಿ ನಡೆದಿದೆ. ಯಲ್ಲಾಪುರ ಚಂದಗುಳಿಯ ಗಿರೀಶ್ ಭಟ್ಟ ಮೃತ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಸೋಂದಾದಲ್ಲಿ ಉಳಿದು ಅಂತಿಮ ವರ್ಷದ ವಿದ್ವತ್ ಓದುತ್ತಿದ್ದ ವಿದ್ಯಾರ್ಥಿ ಭೀಮನಪಾದ ಬಳಿ ಸ್ನಾನಕ್ಕೆ ತೆರಳಿದ ವೇಳೆ ಈ ಘಟನೆ ಸಂಭವಿಸಿದೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version