Important
Trending

ಹಣಕಾಸಿನ ವಿಷಯಕ್ಕೆ ಜಗಳ: ಆಟೋದ ಮೇಲೆ ಟಿಪ್ಪರ್ ಹಾಯಿಸಿ ಓರ್ವನ ಕೊಲೆ

ಹೊನ್ನಾವರ: ತಾಲೂಕಿನ ಅರೇಅಂಗಡಿ ಸಮೀಪ ಮಂಗಳವಾರ ರಾತ್ರಿ ಸಮಯದಲ್ಲಿ ಹಣಕಾಸಿನ ವಿಷಯದಲ್ಲಿ ಆದ ಗಲಾಟೆಯಿಂದ, ಓರ್ವನ ಜೀವವನ್ನೇ ತೆಗೆದಿದೆ. ಹೌದು, ಹಣಕಾಸಿನ ವಿಚಾರದಲ್ಲಿನ ದ್ವೇಷದಿಂದಾಗಿ ಆಟೋ ಹರಿಸಿ ಓರ್ವನ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ವಿನಾಯಕ ನಾರಾಯಣ ಭಟ್ ಮತ್ತು ಜನಾರ್ಧನ ಕೇಶವ ನಾಯ್ಕ ಹಣದ ವ್ಯವಹಾರದ ವಿಷಯದಲ್ಲಿ ಜಗಳ ಮಾಡಿಕೊಂಡಿದ್ದರು. ಇದೇ ವಿಷಯಕ್ಕೆ ದ್ವೇಷದಿಂದ ಅರೇಂಅಗಡಿ ಜನತಾ ಕಾಲೋನಿ ಹತ್ತಿರ ವಿನಾಯಕ ನಾರಾಯಣ ಭಟ್, ಜನಾರ್ದನ ನಾಯ್ಕ ಹಾಗೂ ಸ್ನೇಹಿತರಾದ ವಸಂತ ನಾಯ್ಕ ಇವರನ್ನು ಕೊಲೆ ಮಾಡುವ ಉದ್ದೇಶದಿಂದಲೇ ಟಿಪ್ಪರ್ ಚಲಾಯಿಸಿಕೊಂಡು ಬಂದಿದ್ದ ಎನ್ನಲಾಗಿದೆ.

ರಸ್ತೆಯ ಪಕ್ಕದಲ್ಲಿದ ಆಟೋರಿಕ್ಷಾದ ಹತ್ತಿರ ಜನಾರ್ಧನ ಕೇಶವ ನಾಯ್ಕ , ಓಲ್ವಿನ್ ರವಿ ಲೋಬೋ ಮತ್ತು ವಸಂತ ನಾಯ್ಕ ಇವರ ಮೇಲೆ ಟಿಪ್ಪರ್ ಹಾಯಿಸಿದ್ದಾನೆ. ಇದರಿಂದ ಆಟೋ ಜಖಂ ಆಗಿದ್ದು, ಆಟೋ ಚಾಲಕ ಓಲ್ವೀನ್ ಇವನಿಗೆ ತಲೆ ಭಾಗಕ್ಕೆ ಗಂಭೀರ ಗಾಯವಾದ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ವಸಂತ ಹಾಗೂ ಜನಾರ್ದನ ಇವರಿಗೆ ಗಂಭೀರ ಗಾಯವಾಗಿದ್ದು, ನೆರೆ ಜಿಲ್ಲೆಯ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿ ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button