![](http://i0.wp.com/vismaya24x7.com/wp-content/uploads/2023/12/death.jpg?fit=1280%2C720&ssl=1)
ಶಿರಸಿ: ಕಾಡುಬೆಕ್ಕನ್ನು ಬೆನ್ನಟ್ಟಿ ಹೋದ ಚಿರತೆಯೊಂದು ವಿದ್ಯುತ್ ಕಂಬ ಏರಿ ವಿದ್ಯುತ್ ತಂತಿ ತಗುಲಿ ಪ್ರಾಣಬಿಟ್ಟ ಘಟನೆ ಶಿರಸಿಯಲ್ಲಿ ನಡೆದಿದೆ. ಹೌದು.. ಹಸಿದ ಚಿರತೆಯೊಂದು ಕಾಡುಬೆಕ್ಕನ್ನು ಹಿಡಿಯಲು ಹೋದ ವೇಳೆ ಆ ಕಾಡು ಬೆಕ್ಕು ಜೀವ ಉಳಿಸಿಕೊಳ್ಳಲು ವಿದ್ಯುತ್ ಕಂಬವನ್ನು ಏರಿದೆ. ಅದನ್ನು ಬೆನ್ನಟ್ಟಿದ ಚಿರತೆಯು ತಾನು ವಿದ್ಯುತ್ ಕಂಬ ಏರಲು ಹೋಗಿ , ವಿದ್ಯುತ್ ತಂತಿ ತಗುಲಿ ಕಾಡು ಬೆಕ್ಕಿನೊಂದಿಗೆ ಪ್ರಾಣ ಕಳೆದುಕೊಂಡ ಘಟನೆ ಶಿರಸಿಯ ಬೆಳಗಲ್ಮನೆ ಎಂಬಲ್ಲಿ ನಡೆದಿದೆ. ಸುಮಾರು 3 ವರ್ಷ ಪ್ರಾಯದ ಚಿರತೆ ಎಂದು ಅಂದಾಜಿಸಲಾಗಿದೆ. ಡಿ.ಎಫ್.ಓ ಅಜ್ಜಯ್ಯ ಹಾಗೂ ಶಿರಸಿ ಆರ್.ಎಫ್.ಓ ಶಿವಾನಂದ ಇವರು ಸ್ಥಳ ಪರಿಶೀಲಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ವಿಸ್ಮಯ ನ್ಯೂಸ್, ಶಿರಸಿ