Follow Us On

Google News
Important
Trending

ಚಿನ್ನಾಭರಣ ಕಳ್ಳತನ ವಿಚಾರ ಮುಚ್ಚಲು ವೃದ್ಧೆಯ ಕೊಲೆಗೆ ಯತ್ನ: ಮನೆಕೆಲಸದವನಿಂದಲೇ ದುಷ್ಕೃತ್ಯ

ಕದ್ದ ಚಿನ್ನದಲ್ಲಿ ಹೊಸ ಬೈಕ್ ಖರೀದಿ ಹಾಗೂ ಸ್ನೇಹಿತನಿಗೆ ಸಾಲ

ಭಟ್ಕಳ: ಮುಂಡಳ್ಳಿ ಜೋಗಿ ಮನೆ ಸಮೀಪ ಮನೆಯಲ್ಲಿದ್ದ ಒಂಟಿ ವೃದ್ಧೆಯನ್ನು ಟಾರ್ಗೆಟ್ ಮಾಡಿ ಕೊಲೆಗೆ ಯತ್ನಿಸಿದ ಆರೋಪಿಯನ್ನು 48 ಗಂಟೆಯೊಳಗಾಗಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ, ಶುಕ್ರಯ್ಯ ನಾರಾಯಣ ದೇವಾಡಿಗ ಎಂದು ತಿಳಿದು ಬಂದಿದೆ. ಈತ ವೃದ್ಧೆಯ ಪರಿಚಯಸ್ಥನಾಗಿದ್ದ.

ವೃದ್ಧೆಯ ಮಗ ಉಡುಪಿಯಲ್ಲಿರುವುದರಿಂದ ವೃದ್ಧೆಯ ಮನೆಗೂ ಈತನಿಗೂ ಓಡನಾಟ ಹೆಚ್ಚಿದ್ದು ಮನೆಯ ತೋಟದ ಕೆಲಸ ಹಾಗೂ ವೃದ್ಧೆಗೆ ಸಣ್ಣ ಪುಟ್ಟ ಸಹಾಯ ಮಾಡುತ್ತಿದ್ದ. ಇದನ್ನೇ ನೆಪವಾಗಿಟ್ಟುಕೊಂಡು ಯಾರಿಗೂ ತಿಳಿಯದಂತೆ ವೃದ್ಧೆ ಮನೆಯ ಕಪಾಟಿನಲ್ಲಿದ್ದ ಬಂಗಾರದ ಆಭರಣನ್ನು ಸಲೀಸಾಗಿ ಕದ್ದು ಭಟ್ಕಳದ ಖಾಸಗಿ ಫೈನಾನ್ಸ್ ಒಂದರಲ್ಲಿ ಅಡಮಾನ(ವತ್ತೆ) ಈಡಲು ಹೋದ ವೇಳೆ ಆರೋಪಿ ಬೆರಳಚ್ಚು ಬಂದಿರಲಿಲ್ಲ.

ಹೀಗಾಗಿ ಸ್ನೇಹಿತನ ಹೆಸರಿನಲ್ಲಿ ಆಭರಣಗಳನ್ನು ಅಡವಾಗಿಟ್ಟು ಅದೇ ಸ್ನೇಹಿತನ ಹೆಸರಿನಲ್ಲಿ ಹೊಸ ಬೈಕ್ ಖರೀದಿ ಮಾಡಿದ್ದ. ಅಲ್ಲದೆ, ಅದೇ ಸ್ನೇಹಿತನಿಗೆ 60 ಸಾವಿರ ಹಣವನ್ನು ಸಾಲವಾಗಿ ನೀಡಿದ್ದ. ಅದಾಗಲೇ ಮನೆಯಲ್ಲಿ ಚಿನ್ನಾಭರಣ ನಾಪತ್ತೆಯಾಗಿರುವುದು ವೃದ್ಧೆಗೆ ತಿಳಿದು ಬಂದಿತ್ತು. ಇದೇ ವೇಳೆ ಆರೋಪಿ ಬೈಕ್ ಖರೀದಿಸಿರುವುದು ವೃದ್ಧೆಗೆ ತಿಳಿದು ಆರೋಪಿ ಬಳಿ ಪದೇ ಪದೇ ಹಣವಿಲ್ಲ ಎಂದು ಹೇಳುತ್ತಿದ್ದವನು? ಹೇಗೆ ಬೈಕ್ ಖರೀದಿ ಮಾಡಿದೆ ಎಂದು ಪ್ರಶ್ನೆ ಮಾಡಿದ್ದಳು.

ಇದನ್ನು ಗಮನಿಸಿದ ಆರೋಪಿ ಒಂದಲ್ಲ ಒಂದು ದಿನ ಈ ವೃದ್ಧೆಯಿಂದ ನನಗೆ ಸಮಸ್ಯೆ ಎದುರಾಗ ಬಹುದೆಂದು ತಿಳಿದು, ವೃದ್ಧೆಯ ಸಾವಿಗೆ ಸಂಚು ರೂಪಿಸಿ ಯಾವುದೇ ಅನುಮಾನ ಬಾರದಂತೆ ಸಹಜವಾಗಿ ಸಾಯಿಸುವ ಯೋಜನೆ ರೂಪಿಸಿದ್ದ. ಅದರಂತೆ ಟಿವಿ ನೋಡುತ್ತಿದ್ದ ವೃದ್ಧೆಯ ಮುಖಕ್ಕೆ ಬಟ್ಟೆಯನ್ನು ಸುತ್ತಿ ಉಸಿರು ಗಟ್ಟಿಸಿ ಸಾಯಿಸಲು ಯತ್ನಿಸಿದಾಗ ವೃದ್ಧೆ ಕಿರುಚಿಕೊಂಡ ವೇಳೆ ಅಲ್ಲಿಂದ ಓಡಿ ಪರಾರಿಯಾಗಿದ್ದ.

ಬಳಿಕ ಘಟನೆ ತಿಳಿದು ಮನೆಯ ಬಳಿ ಅಕ್ಕ ಪಕ್ಕದ ಮನೆಯವರು ಬಂದು ಜಮಾವಣೆಯಾದ ವೇಳೆ ಈತನು ಕೂಡ ಯಾರಿಗೂ ಅನುಮಾನ ಬಾರದಂತೆ ಅಲ್ಲಿ ಬಂದು ವೃದ್ಧೆಯ ಕ್ಷೇಮ ವಿಚಾರಣೆ ಮಾಡಿದ್ದ. ಆ ವೇಳೆಯಲ್ಲಿ ವೃದ್ದೆ ಇದೆ ರೀತಿ ಬಟ್ಟೆ ಧರಿಸಿದವನು ನನ್ನ ಸಾವಿಗೆ ಯತ್ನಿಸಿದ್ದನು ಎಂದು ಹೇಳಿದಾಗ ಆರೋಪಿ ಅಣ್ಣಾ ನನ್ನ ತಮ್ಮನ ಮೇಲೆ ಅನುಮಾನ ಪಡುತ್ತಿದ್ದಿರ ಎಂದು ಗಲಾಟೆ ಮಾಡಿ ಹೋಗಿದ್ದ ಎನ್ನಲಾಗಿದೆ.

ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಸಿ.ಪಿ.ಐ ಚಂದನ್ ಗೋಪಾಲ ಹಾಗೂ ತಂಡ ತನಿಖೆ ಕೈಗೊಂಡಾಗ ಆರೋಪಿ ಘಟನೆ ನಡೆದ ರಾತ್ರಿ ಮುಂಡಳ್ಳಿ ಗುಡ್ಡದ ಮೇಲೆ ವಾಸವಾಗಿದ್ದ. ಬಳಿಕ ಆರೋಪಿಗಾಗಿ ಆತನ ಮನೆಯ ಅಂಗಡಿ ಸಮೀಪ ಹೊಂಚು ಹಾಕಿ ಕುಳಿತಿದ್ದ ಪೊಲೀಸರಿಗೆ ಮನೆಗೆ ಬರುತ್ತಿದ್ದ ಆರೋಪಿಯನ್ನು ಹಿಡಿದು ವಿಚಾರಣೆ ಮಾಡಿದಾಗ ತಾನೇ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಆರೋಪಿವನ್ನು ನ್ಯಾಯಾಲಯಕ್ಕೆ ಒಪ್ಪಿಸಿ ಕಾರವಾರದ ಕಾರಾಗೃಹಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ ಸಿಬ್ಬಂದಿಗಳಾದ ಮಂಜುನಾಥ ಗೊಂಡ , ಅಮಿತ್ ಶೇಖ್, ಈರಣ್ಣ ಪೂಜಾರಿ, ವಿನೋದ ಜಿಬಿ, ನಿಂಗನ ಗೌಡ ಪಾಟೀಲ್ ಹಾಗೂ ಚಾಲಕ ದೇವರಾಜ ಭಾಗವಹಿಸಿದ್ದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button