Important
Trending

ಕಾಯಿ ವ್ಯಾಪಾರಿಯಿಂದ ಹಣ ಕಸಿದುಕೊಂಡು ಓಡಿಹೋದ ಯುವಕ: ಸಿಸಿಟಿವಿಯಲ್ಲಿ ಸೆರೆಯಾಗಿದೆ ದೃಶ್ಯ

ಶಿರಸಿ: ತಾಲೂಕಿನ ಸಿಂಪಿಗಲ್ಲಿ ವಿಠೋಬ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ಕಾಯಿ ಮಾರಾಟ ಮಾಡುತ್ತಿದ್ದವನ ಹಣವನ್ನು ಕಳ್ಳನೋರ್ವ ಕಸಿಕೊಂಡು ಓಡಿ ಹೋಗಿದ್ದ. ಕಾಯಿ ವ್ಯಾಪಾರಿ ತನ್ನ ಬಳಿ ಇದ್ದ 12 ಸಾವಿರ ರೂ ಎಣಿಸುತ್ತಿದ್ದ ಸಂದರ್ಭದಲ್ಲಿ ಎಕಾಎಕಿ ಬಂದ ವ್ಯಕ್ತಿಯೋರ್ವನು ಹಣವನ್ನು ಕಸಿದುಕೊಂಡು ಓಡಿ ಹೋಗಿದ್ದ.

ಇದನ್ನು ಗಮನಿಸಿ ಕಳ್ಳನನ್ನು ಬೆನ್ನಟ್ಟಿದರೂ ಕ್ಷಣಮಾತ್ರದಲ್ಕಿ ತಪ್ಪಿಸಿಕೊಂಡು ಕಣ್ಣರೆಯಾಗಿದ್ದ. ಈ ಕುರಿತಾಗಿ ಶಿರಸಿ ನಗರಠಾಣೆಯಲ್ಲಿ ದೂರು ನೀಡಲಾಗಿದ್ದು, ಕಳೆದ ಕೆಲ ದಿನಗಳ ಹಿಂದಷ್ಟೆ ಪಿಎಸ್‌ಐ ಆಗಿ ಅಧಿಕಾರ ವಹಿಸಿಕೊಂಡ ನಾಗಪ್ಪ ಅವರಿಂದ ಕ್ಷೀಪ್ರ ಕಾರ್ಯಚರಣೆ ಕೈಗೊಂಡು ಕಾಯಿ ಮಾರಾಟಗಾರನಿಂದ 12 ಸಾವಿರ ರೂ ಎಗರಿಸಿಕೊಂಡು ಓಡಿಹೋಗಿದ್ದ ಆರೋಪಿಯನ್ನು ಘಟನೆ ನಡೆದ ಒಂದು ತಾಸಿನಲ್ಲಿ ವಶಕ್ಕೆ ಪಡೆಯುವ ಕಾರ್ಯ ಮಾಡಿದ್ದಾರೆ.

ಕಳ್ಳತನದ ಘಟನೆಯು ಸಿ.ಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಚಿತ್ರದಲ್ಲಿ ಕಾಣುತ್ತಿರುವ ನಾಲ್ಕು ಜನ ಹುಡುಗರ ಪೈಕಿ ಬಿಳಿ ಬಣ್ಣದ ಅಂಗಿಯನ್ನು ದರಿಸಿರುವ ವ್ಯಕ್ತಿಯೇ ಹಣ ದೋಚಿ ಪರಾರಿಯಾದ ವ್ಯಕ್ತಿ. ಸಿ.ಸಿ ಕ್ಯಾಮರಾ ದೃಷ್ಯಾವಳಿ ಗಮನಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಘಟನೆ ನಡೆದ 1 ತಾಸಿನಲ್ಲಿಯೇ ಕಳ್ಳನನ್ನು ಸೆರೆ ಹಿಡಿದು, ಹಣ ಕಳೆದುಕೊಂಡ ವ್ಯಾಪಾರಸ್ಥನಿಗೆ ನೀಡುವ ಕಾರ್ಯ ಮಾಡಿದ್ದಾರೆ,

ವಿಸ್ಮಯ ನ್ಯೂಸ್, ಶಿರಸಿ.

Back to top button