Important
Trending

ಶಿವಲಿಂಗ ವಿರೂಪಗೊಳಿಸಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಕಿಡಿಗೇಡಿಗಳು

WhatsApp Group Join Now

ಶಿರಸಿ: ಪವಿತ್ರ ಶಿವಲಿಂಗಕ್ಕೆ ಅಪವಿತ್ರ ಮಾಡಿ, ಧಾರ್ಮಿಕ ಭಾವನೆಗೆ ಧಕ್ಕೆ ತಂದ ಘಟನೆ ಶಿರಸಿ ತಾಲೂಕಿನ ನೆರೆಬೈಲ್ ನಲ್ಲಿರುವ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ನಡೆದಿದೆ. ಯಾರೋ ಕಿಡಿಗೇಡಿಗಳು ಶಿವಲಿಂಗ ಮೂರ್ತಿಯ ಮೇಲೆ ಚಾಕ್ ಪೀಸ್‌ನಿಂದ ಇಂಗ್ಲಿಷ್ ಅಕ್ಷರದಲ್ಲಿ ಬರೆದಿದ್ದಾರೆ. ಬೆಳಿಗ್ಗೆ ಪುರೋಹಿತರು ದೇವಾಲಯಕ್ಕೆ ತೆರಳಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಪೋಲಿಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ದೇವಸ್ಥಾನದತ್ತ ಸಾರ್ವಜನಿಕರ ದಂಡೆ ಆಗಮಿಸುತ್ತಿದೆ. ಆದರೆ, ದೇವಾಲಯದಲ್ಲಿ ಯಾವುದೇ ಕಳ್ಳತನವಾಗಿಲ್ಲ. ಹೀಗಾಗಿ ಉದ್ದೇಶಪೂರ್ವಕವಾಗಿ ಕಿಡಿಗೇಡಿಗಳು, ಶಿವಲಿಂಗವನ್ನು ವಿರೂಪಗೊಳಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್, ಶಿರಸಿ

Back to top button