Important
Trending

ಮೀನು ಹಿಡಿಯಲು ಹೋದ ವೇಳೆ ಅವಾಂತರ: ತಂದೆ-ಮಗ ಸಾವು

ಯಲ್ಲಾಪುರ: ನೀರಲ್ಲಿ ಮುಳುಗಿ ತಂದೆ-ಮಗ ಮೃತಪಟ್ಟಿರುವ ಘಟನೆ ತಾಲೂಕಿನ ಮಂಚಿಕೇರಿ ಸಮೀಪದ ಬೇಡ್ತಿ ಹಳ್ಳದಲ್ಲಿ ನಡೆದಿದೆ. ತಂದೆ , ಮಗ ಇಬ್ಬರೂ ಮೀನು ಹಿಡಿಯಲು ತೆರಳಿದ್ದರು. ಆದರೆ, ಸಂಜೆಯಾದರೂ ಮನೆಗೆ ಮರಳಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಅನುಮಾನ ಬಂದು ಹುಡುಕಾಟ ನಡೆಸಿದ್ದಾರೆ.

ಬೇಡ್ತಿ ಹಳ್ಳದ ಸುತ್ತಮುತ್ತ ಹುಡುಕಾಟ ನಡೆಸಿದಾಗ ಮುಳುಗಿ ಮೃತಪಟ್ಟಿರುವುದು ತಿಳಿದುಬಂದಿದೆ. ತಕ್ಷಣ ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿದ್ದು, ಸ್ಥಳೀಯರ ಸಹಾಯದಿಂದ ಮೃತ ದೇಹಗಳನ್ನು ಹೊರತೆಗೆದಿದ್ದಾರೆ.ಹಳ್ಳಿಗದ್ದೆಯ ಖಲಂದರ ಫಕ್ರು ಸಾಬ್ (50) ಹಾಗೂ ಆತನ ಮಗ ತನ್ವೀರ್ ಕಲಂದರ್ ಸಾಬ್ (21) ಮೃತರು. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Back to top button