ಪದ್ಮಶ್ರೀ ತುಳಸಿ ಗೌಡ ಆರೋಗ್ಯದಲ್ಲಿ ಏರುಪೇರು: ಕಾರವಾರ ಕ್ರಿಮ್ಸ್ ಗೆ ದಾಖಲು

ಅಂಕೋಲಾ : ವೃಕ್ಷಮಾತೆ,ಪದ್ಮಶ್ರೀ ಪುರಸ್ಕೃತ ಅಂಕೋಲಾ ತಾಲೂಕಿನ ಹೊನ್ನಳ್ಳಿಯ, ತುಳಸಿ ಗೌಡ ಇವರ ಆರೋಗ್ಯದಲ್ಲಿ ಹಠಾತ್ ಏರುಪೇರಾಗಿ,ಮನೆಯಲ್ಲಿಯೇ ಕುಸಿದು ಬಿದ್ದು, ನಂತರ ಕಾರವಾರ ಕ್ರಿಮ್ಸ್ ಗೆ ದಾಖಲಿಸಲಾಗಿದ್ದು, ಸ್ವಲ್ಪ ಪ್ರಮಾಣದಲ್ಲಿ ಪಾರ್ಕಿನ್ಸನ್ ಇರಬಹುದೇ ? ಇಲ್ಲವೇ ಇತರೆ ಕಾರಣಗಳೇನಿರಬಹುದು ಎಂದು,ತುಳಸಿ ಗೌಡ ಅವರನ್ನು ಪರೀಕ್ಷಿಸಿದ ವೈದ್ಯರಿಂದ ಅಧಿಕೃತ ಮಾಹಿತಿ ತಿಳಿದು ಬರಬೇಕಿದೆ.

ಕ್ಷೇತ್ರದ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು,ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು,ಸಾಮಾಜಿಕ ಕಾರ್ಯಕರ್ತರು ಮತ್ತಿತರರು ಅಜ್ಜಿಯ ಆರೋಗ್ಯ ಕಾಳಜಿಗೆ ಒತ್ತು ನೀಡುವಂತೆ ಸಂಬಂಧಿತ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದ್ದು, ಕ್ರಿಮ್ಸ್ ನಿರ್ದೇಶಕ ಡಾ. ಗಜಾನನ ನಾಯಕ ಸಹ ತುಳಸಿ ಗೌಡ ಅವರ ಆರೋಗ್ಯ ಕಾಳಜಿಗೆ ವಿಶೇಷ ಮಾರ್ಗದರ್ಶನ ನೀಡಿದ್ದಾರೆ. ಪದ್ಮಶ್ರೀ ತುಳಸಿ ಗೌಡ ಶೀಘ್ರ ಚೇತರಿಸಿಕೊಳ್ಳಲಿ ಎಂದು ಪರಿಸರ ಪ್ರೇಮಿಗಳು, ಗೌಡ ಕುಟುಂಬದ ಆಪ್ತರು ಮತ್ತು ಹಿತೈಷಿಗಳು ಪ್ರಾರ್ಥಿಸಿದ್ದಾರೆ. ನಾಡಿನ ಹಲವು ಗಣ್ಯರು, ಮಠಾದೀಶರು ಸೇರಿದಂತೆ ಹಲವು ಪ್ರಮುಖರು,ಅಜ್ಜಿ ಆರೋಗ್ಯ ಸ್ಥಿತಿಗತಿಗಳ ಬಗ್ಗೆ,ವಿಚಾರಿಸುತ್ತಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version