Follow Us On

Google News
Important
Trending

ದೇವಿಮನೆ ಘಟ್ಟದ ಸಮೀಪ ಭೂಕುಸಿತ: ಕುಮಟಾ-ಶಿರಸಿ ಸಂಚಾರ ಸ್ಥಗಿತ

ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ನದಿಗಳು ಅಪಾಯಕಾರಿ ಮಟ್ಟವನ್ನು ಮೀರಿಹರಿಯುತ್ತಿವೆ. ಅಘನಾಶಿನಿ, ಶರಾವತಿ, ಚಂಡಿಕಾ ನದಿಗಳು ಉಕ್ಕಿಹರಿಯುತ್ತಿದ್ದು, ತಗ್ಗುಪ್ರದೇಶಗಳು ಜಲಾವೃತವಾಗಿದೆ. ಕುಮಟಾ- ಶಿರಸಿ ರಸ್ತೆಯ ಅಳಕೋಡ ಸಮೀಪ ರಸ್ತೆ ಮೇಲೆ ನೀರುನಿಂತು ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಅಲ್ಲದೆ, ದೇವಿಮನೆ ಘಟ್ಟದ ಸಮೀಪ ದೊಡ್ಡಮಟ್ಟದ ಭೂಕುಸಿತವಾಗಿದೆ. ಹೀಗಾಗಿ ಕುಮಟಾ- ಶಿರಸಿ ಹೆದ್ದಾರಿಯಲ್ಲಿ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ತೆರುವು ಕಾರ್ಯಾಚಣೆ ಮುಂದುವರಿದಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

Back to top button