ನಾಡ ಬಂದೂಕಿನ ಗುಂಡು ತಗುಲಿ ವ್ಯಕ್ತಿ ಸಾವು: ಶೂಟೌಟ್ ಸುತ್ತ ಅನುಮಾನ?

ಕುಮಟಾ: ತಡರಾತ್ರಿ ಆತ ನಾಡ ಬಂದೂಕಿನಿoದ ಹೆಬ್ಬಾವು ಹೊಡೆಯಲು ಹೋಗಿದ್ದ. ಆದ್ರೆ, ಹೆಬ್ಬಾವಿಗೆ ಹೊಡೆದ ಗುಂಡು ತಿರುಗಿ ಆತನಿಗೆ ತಗುಲಿದ್ದು, ವ್ಯಕ್ತಿ ಮೃತಪಟ್ಟ ಘಟನೆ ಕುಮಟಾ ತಾಲೂಕಿನ ಕತಗಾಲ್ ಗ್ರಾಮದಲ್ಲಿ ನಡೆದಿದೆ. ಪ್ರಥಮ ಸುಬ್ಬ ನಾಯ್ಕ ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ. ಈತನ ಮನೆಯ ಸಮೀಪವೇ ಕೋಳಿ ಫಾರ್ಮ್ ಇದ್ದು, ಈ ಕೋಳಿ ಫಾಮ್‌ಗೆ ಹೆಬ್ಬಾವೊಂದು ರಾತ್ರಿ ನುಗ್ಗಿದೆ.

ಹೆದ್ದಾರಿಯಲ್ಲಿ ಪಲ್ಟಿಯಾದ ಆ್ಯಸಿಡ್ ಸಾಗಿಸುತ್ತಿದ್ದ ಟ್ಯಾಂಕರ್: ಕ್ಯಾಬಿನ್ ನಿಂದ ಬೇರ್ಪಟ್ಟ ಟ್ಯಾಂಕರ್ ಭಾಗ ? ರಾಸಾಯನಿಕ ಸೋರಿಕೆಯಿಂದ ಕೆಲ  ಕಾಲ ಮೂಡಿದ್ದ ಆತಂಕ

ಹೀಗಾಗಿ ಹೆಬ್ಬಾವನ್ನು ಹೊಡೆಯಲು ಈತ ಬಂದೂಕು ತೆಗೆದುಕೊಂಡು ಬಂದಿದ್ದು, ಗುಂಡು ಹಾರಿಸಿದ್ದಾರೆ. ಆದ್ರೆ, ಈ ವೇಳೆ ಗುಂಡು ಈತನಿಗೆ ತಗುಲಿ ಸಾವನ್ನಪ್ಪಿದ್ದಾನೆ. ಕುಮಟಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ತನಿಖೆಯಿಂದ ಸತ್ಯಾಸತ್ಯತೆ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್, ಕುಮಟಾ

Exit mobile version