
ಜಿಲ್ಲೆಯಲ್ಲಿಂದು ಒಂದು ಸಾವು
ಶಿರಸಿಯಲ್ಲಿ 48, ಕಾರವಾರದಲ್ಲಿ 52 ಕೇಸ್
82 ಮಂದಿ ಗುಣಮುಖರಾಗಿ ಬಿಡುಗಡೆ
[sliders_pack id=”1487″] ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಶನಿವಾರ 213 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ ಕಾರವಾರದಲ್ಲಿ 52, ಶಿರಸಿಯಲ್ಲಿ 48, ಸಿದ್ದಾಪುರ 13, ಯಲ್ಲಾಪುರದಲ್ಲಿ 43, ಕುಮಟಾದಲ್ಲಿ 16, ಅಂಕೋಲಾ 11, ಹೊನ್ನಾವರ 11, ಭಟ್ಕಳದಲ್ಲಿ 4, ಮುಂಡಗೋಡಿನಲ್ಲಿ 5, ಜೋಯ್ಡಾ 1, ಹಳಿಯಾಳದಲ್ಲಿ ಆರು ಮಂದಿಗೆ ಸೋಂಕು ತಗುಲಿದೆ.
ಇದೇ ವೇಳೆ ಇಂದು 82 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನು ಹೊನ್ನಾವರದಲ್ಲಿ 10, ಭಟ್ಕಳದಲ್ಲಿ 6, ಶಿರಸಿಯಲ್ಲಿ 7, ಹಳಿಯಾಳದಲ್ಲಿ 37, ಅಂಕೋಲಾದಲ್ಲಿ 2, ಜೋಯ್ಡಾ 1, ಮುಂಡಗೋಡ 19 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿಂದು ಒಂದು ಸಾವು
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5,558ಕ್ಕೆ ಏರಿಕೆಯಾಗಿದೆ. ಇಂದು ಶಿರಸಿಯಲ್ಲಿ ಒಂದು ಸಾವಾಗಿದ್ದು, ಶಿರಸಿಯಲ್ಲಿ ಇದುವರೆಗೂ ಕರೊನಾದಿಂದ ಏಳು ಜನರು ಬಲಿಯಾದಂತಾಗಿದೆ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 56ಕ್ಕೆ ಏರಿಕೆಯಾಗಿದೆ. 650 ಮಂದಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ
ಇದನ್ನೂ ಓದಿ: ಇಂದಿನ ಪ್ರಮುಖ ಸುದ್ದಿಗಳು
- ಮುಂಗಾಲುಗಳೆರಡೂ ತುಂಡಾಗಿ ನಿತ್ರಾಣ ಸ್ಥಿತಿಯಲ್ಲಿತ್ತು ಕಡಲಾಮೆ: ಅಪರೂಪದ ಜೀವಿಯನ್ನು ರಕ್ಷಿಸಿ ಚಿಕಿತ್ಸೆ
- ಕೆರೆ ಮೀನು ಬೇಟೆ: ಗಮನಸೆಳೆದ ಒಂಬತ್ತು ಕೆ.ಜಿಗೂ ಹೆಚ್ಚು ತೂಕದ ಮೀನು
- ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದ ಚೈತ್ರಿಕಾ ಹೆಗಡೆ
- ಭಟ್ಕಳದಲ್ಲಿ ದರೋಡೆಗೆ ಸಂಚು ರೂಪಿಸುತ್ತಿದ್ದ ಮೂವರು ಅಂದರ್ : ಗರುಡಾ ಗ್ಯಾಂಗಿನ ಇಬ್ಬರು ಪರಾರಿ
- ಮನೆ ಹಿಂದಿನ ಶೆಡ್ಡಿಗೆ ನುಗ್ಗಿ ಅಡಿಕೆ ಕಳ್ಳತನ