ಅಂಕೋಲಾ : ತಾಲೂಕಿನ ಬಾಸಗೋಡ ಗ್ರಾಮದ ನಿವೃತ್ತ ಶಿಕ್ಷಕ ರಾಮಚಂದ್ರ ಮೋನಪ್ಪ ನಾಯಕ(83) ಶನಿವಾರ ಬೆಳಿಗ್ಗೆ ದೈವಾಧೀನರಾದರು. ಜಿಲ್ಲೆಯ ವಿವಿಧೆಡೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸುಧೀರ್ಘ ಸೇವೆ ಸಲ್ಲಿಸಿ, ನಂತರ ಬೆಳಂಬಾರ-ಮೂಡ್ರಾಣಿ ಶಾಲೆಯಲ್ಲಿ ನಿವೃತ್ತರಾಗಿದ್ದರು.
ತಮ್ಮ ಶಿಸ್ತುಬದ್ಧ ಜೀವನ, ನೇರ ನಡೆನುಡಿಗಳಿಂದ ಗುರುತಿಸಿ ಕೊಂಡಿದ್ದ ಇವರು ತಮ್ಮ ಆಪ್ತ ವಲಯದಲ್ಲಿ ಹಾಸ್ಯ ಪ್ರವೃತ್ತಿಯ ಮೂಲಕವೂ ಗಮನ ಸೆಳೆಯುತ್ತಿದ್ದರು. ಸುತ್ತಮುತ್ತಲ ಹಳ್ಳಿಗರ ಪ್ರೀತಿ-ವಿಶ್ವಾಸಗಳಿಸಿದಲ್ಲದೇ ರಾಮಚಂದ್ರ ಮಾಸ್ತರ ಎಂದೇ ಪರಿಚಿತರಾಗಿದ್ದರು.
ಮೃತರು, ಪತ್ನಿ ದೇವಮ್ಮಾ ಆರ್.ನಾಯಕ, ಮಕ್ಕಳಾದ ಶ್ರೀ ಲತಾ ಅರಮನೆ, ರಾಜಶ್ರೀ ಜಯರಾಮ ನಾಯಕ, ಹರೀಶ ಆರ್.ನಾಯಕ, ರಾಜೇಶ ಆರ್.ನಾಯಕ, ಮೊಮ್ಮಕ್ಕಳು, ಕುಟುಂಬ ವರ್ಗ ಮತ್ತು ಅಪಾರ ಬಂಧುಬಳಗ ತೊರೆದಿದ್ದಾರೆ. ಹಿರಿಯ ಚೇತನದ ಅಗಲುವಿಕೆಗೆ ವಿವಿಧ ಗಣ್ಯರು ಸಂತಾಪ ಸೂಚಿ ಸಿದ್ದು, ಮೃತರ ಅಂತ್ಯ ಕ್ರಿಯೆಯಲ್ಲಿ ಊರ ನಾಗರಿಕರು, ತಾಲೂಕಿನ ಹಲವು ಪ್ರಮುಖರು, ಬಂಧು ಬಳಗ ದವರು ಮತ್ತು ಕುಟುಂಬದ ಹಿತೈಷಿಗಳು ಪಾಲ್ಗೊಂಡಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಇದನ್ನೂ ಓದಿ: ಇಂದಿನ ಪ್ರಮುಖ ಸುದ್ದಿಗಳು
- ಹೆಂಡತಿಗೆ ಊಟ ತಯಾರಿ ಮಾಡಲು ಹೇಳಿ ಕುಳಿತಲ್ಲಿಯೇ ಮೃತಪಟ್ಟ ಪಶು ಚಿಕಿತ್ಸಾಲಯದ ನೌಕರ
- ಬೃಹತ್ ಶೋರೂಮ್ ಬ್ರೌನ್ವುಡ್ ನಲ್ಲಿ 12 ಉದ್ಯೋಗಾವಕಾಶಗಳು: ಇಂದೇ ಸಂಪರ್ಕಿಸಿ
- ವಿದ್ಯಾರ್ಥಿಗಳಿಗೆ ಭಗವದ್ಗೀತೆ ನೀಡಿ ಭವಿಷ್ಯಕ್ಕೆ ಶುಭ ಕೋರಿದ ಪ್ರಮುಖ ಸೌಹಾರ್ದ ಸಹಕಾರಿ
- ಉತ್ತಮ ಭವಿಷ್ಯ ರೂಪಿಸಿಕೊಳ್ಳಲು, ಈಗಿನಿಂದಲೇ ಸಮಯಕ್ಕೆ ಮಹತ್ವ ನೀಡಿ : ಡಾ. ಗಣೇಶ ನಾಗ್ವೇಕರ ಕಲಾ ಮತ್ತು ವಾಣಿಜ್ಯ ವಿದ್ಯಾಲಯದಲ್ಲಿ ನಡೆದ ವಾರ್ಷಿಕ ಸಮ್ಮೇಳನ
- ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ಕೇಣಿಯಲ್ಲಿ ಸರ್ವಋತು ಆಳ ಸಮುದ್ರ ಗ್ರೀನ್ಫೀಲ್ಡ್ ಬಂದರಿನ ಅಭಿವೃದ್ಧಿ