
ಸಿದ್ದಾಪುರ: ಕಾಳೆನಳ್ಳಿಯಲ್ಲಿ ನಡೆದ ಯುವಕ ಸಂತೋಷ ನ ಆತ್ಮಹತ್ಯೆ ಪ್ರಕರಣಕ್ಕೆ ಸಂಬoಧಿಸಿದoತೆ ಇಬ್ಬರು ಆರೋಪಿಗಳನ್ನು ಸಿದ್ಧಾಪುರ ಪೊಲೀಸ್ ರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಸಿದ್ದಾಪುರ ಚನ್ಮಾವ್ ನ ಹೇಮಂತ ನಾಯ್ಕ್, ಶಿವಕುಮಾರ ನಾಯ್ಕ್ ಬಂಧಿತ ಆರೋಪಿಗಳಾಗಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಚರಣ, ಮನೋಜ, ಲೋಕೇಶ ಅವರನ್ನ ಪೊಲೀಸರು ಇನ್ನೇನು ಒಂದೆರಡು ದಿನಗಳಲ್ಲಿ ಬಂಧಿಸಲಿದ್ದಾರೆ. ಘಟನೆಗೆ ಸಂಬoಧಿಸಿದoತೆ ಹಲವಾರು ಜನರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆರೋಪಿಗಳು ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಕವಚೂರ್ ಬಳಿ ಬಂಧಿಸಲು ಯಶಸ್ವಿಯಾಗಿದ್ದಾರೆ.
ವಿಸ್ಮಯ ನ್ಯೂಸ್, ಸಿದ್ದಾಪುರ