Join Our

WhatsApp Group
Important
Trending

ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿ ನೇಣಿಗೆ ಶರಣು : ಆಟ ಪಾಠಗಳಲ್ಲಿ ಮುಂದಿದ್ದ ಯುವತಿಗೆ ಬೇಸರವಾಯಿತೇ ಜೀವನ ?

ಅಂಕೋಲಾ : ಯುವತಿ ಒರ್ವಳು ತನ್ನ ಮನೆಯಲ್ಲಿಯೇ ನೇಣಿಗೆ ಶರಣಾದ ಧಾರಣ ಘಟನೆ ಅಗಸೂರು ಗ್ರಾ ಪಂ ವ್ಯಾಪ್ತಿಯ ಅಡ್ಲೂರಿನಲ್ಲಿ ಸಂಭವಿಸಿದೆ. ಕವನ ಲಕ್ಷ್ಮಣ ಗೌಡ (17) ಮೃತ ದುರ್ದೈವಿ. ಅವಳು ಎಸ್ ಎಸ್ ಎಲ್ ಸಿ ಮುಗಿಸಿ ,ಹತ್ತಿರದ ಆಗಸೂರು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ.

ಇಲ್ಲಿದೆ ಉದ್ಯೋಗಾವಕಾಶ: ಟೂ ವೀಲರ್ ಮೆಕ್ಯಾನಿಕ್ ಗಳು ಬೇಕಾಗಿದ್ದಾರೆ

ತನಗಿದ್ದ ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆ ಇಲ್ಲವೇ ಬೇರೆ ಅದಾವುದೋ ಕಾರಣವನ್ನು ಮನಸ್ಸಿಗೆ ಹಚ್ಚಿಕೊಂಡ ಕವನ ಇವಳು, ತನ್ನ ತಾಯಿ ಮನೆಗೆಲಸದ ನಿಮಿತ್ತ ಹೊರಗಡೆ ಇದ್ದಾಗ, ಮತ್ತು ತಮ್ಮ ಸಾಮಾನು ತರಲು ಅಂಗಡಿಗೆ ಹೋದಾಗ, ಅವರ ಗಮನಕ್ಕೆ ಬಾರದಂತೆ ಮನೆಯ ಕೋಣೆಯೊಂದರಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದಳು. ಬಳಿಕ ಅವಳನ್ನು ಆಸ್ಪತ್ರೆಗೆ ಕರೆ ತರಲಾಗಿತ್ತಾ ರೂ ಅವಳು ಮೃತಪಟ್ಟಿದ್ದಾಳೆ ಎಂದು ಪರೀಕ್ಷಿಸಿದ ವೈದ್ಯರು ದೃಢಪಡಿಸಿದ್ದಾರೆ. ಸಿಪಿಐ ಚಂದ್ರಶೇಖರ್ ಮಠಪತಿ, ಪಿ. ಎಸ್ ಐ ಜಯಶ್ರೀ ಪ್ರಭಾಕರ್ , ಎ ಎಸ್ ಐ ಚಂದ್ರಕಾಂತ ನಾಯ್ಕ ಮತ್ತು ಸಿಬ್ಬಂದಿಗಳು ,ಆಸ್ಪತ್ರೆಗೆ ಭೇಟಿ ನೀಡಿ,ಮೃತ ದೇಹ ಪರಿಶೀಲಿಸಿ ಕಾನೂನು ಕ್ರಮ ಮುಂದುವರಿಸಿದ್ದಾರೆ.

ಆಟ ಪಾಠಗಳಲ್ಲಿ ಮುಂದಿದ್ದ ಈ ಪ್ರತಿಭೆಯ ಅಕಾಲಿಕ ನಿಧನದ ಸುದ್ದಿ ಊರಿನಲ್ಲಿ ಶೋಕದ ವಾತಾವರಣ ಮೂಡಿಸಿದೆ.ತನ್ನ ಮಗಳು ಬದುಕಿ ಬಂದಾಳು ಎಂದು ಹೆತ್ತಮ್ಮ ಆಸೆ ಕಂಗಳಿಂದ ಕಾಯುತ್ತಿದ್ದಾಳಾದರೂ,ಅವಳ ಕಣ್ಣಾಲಿಗಳು ಒದ್ದೆಯಾಗುತ್ತ ಸಾಗಿ,ಮಗಳು ಬಾರದ ಲೋಕಕ್ಕೆ ತೆರಳಿರುವುದು ,ಬಡ ಕುಟುಂಬದಲ್ಲಿ ನೋವಿನ ಆಕ್ರಂದನ ಮುಗಿಲು ಮುಟ್ಟುವಂತಾಗಿದೆ. ಸ್ಥಳೀಯ ಪ್ರಮುಖರು, ಕಾಲೇಜಿನವರು ಕವನಳ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು,ಬಾಳಿ ಬೆಳಗಬೇಕಾದ ಯುವ ಪ್ರತಿಭೆ ತನ್ನ ಜೀವನ ಕೊನೆಗಾಣಿಸಿಕೊಂಡ ಬಗ್ಗೆ, ಪೊಲಿಸರಿಂದ ಹೆಚ್ಚಿನ ಮತ್ತು ಅಧಿಕೃತ ಮಾಹಿತಿಗಳು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button